ರಾಜ್ಯದ ವಿವಿಧೆಡೆಗಳಲ್ಲಿ ಪೋನ್ ಇನ್ ಕಾರ್ಯಕ್ರಮ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ರಿ) ವತಿಯಿಂದ ರಾಜ್ಯದ ವಿವಿಧೆಡೆಗಳಲ್ಲಿ ಪೋನ್ ಇನ್ ಕಾರ್ಯಕ್ರಮ ನಡೆಯಿತು.

ಬೆಂಗಳೂರು ಉತ್ತರ ಜಿಲ್ಲೆ
30-6-2021 ರಂದು ಬೆಂಗಳೂರು ಉತ್ತರ ಸಾ.ಶಿ.ಇಲಾಖೆಯ ಉಪ ನಿರ್ದೇಶಕರಾದ ಶ್ರೀ ನಾರಾಯಣ ಸರ್ ಪೋನ್ ಇನ್ ಕಾರ್ಯಕ್ರಮದ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡುವುದರ ಮೂಲಕ ಉದ್ಘಾಟಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಚಿದಾನಂದ ಪಾಟೀಲ್, ಜಿಲ್ಲಾ ಅಧ್ಯಕ್ಷ ಗಂಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣ ಭಟ್, ಶಿಕ್ಷಕ ಸಂಘದ ಪ್ರಮುಖರಾದ ಪ್ರದೀಪ್ ಎ.ಸಿ, ಹರಿದಾಸ್, ಕುಮಾರ ಮತ್ತು ಉಪನಿರ್ದೇಶಕರ ಕಚೇರಿಯ ಇ.ಓ.ಜಯಪ್ರಕಾಶ ಹಾಗೂ ವಿಷಯ ಪರಿವೀಕ್ಷಕರಾದ ರಾಮಲಿಂಗೇಗೌಡ ಇವರು ಉಪಸ್ಥಿತರಿದ್ದರು.

ಕಲಬುರ್ಗಿ
ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಜ್ಞಾನಾಮೃತ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ ಕೇಂದ್ರ ಹಾಗೂ ಮಿಲೇನಿಯಂ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಫೋನ್ ಇನ್ ಕಾರ್ಯಕ್ರಮದ 2  ನೇ ಆವೃತ್ತಿಯ ಉದ್ಛಾಟನಾ ಸಮಾರಂಭ ಜುಲೈ 1 ರಂದು ಸಂಜೆ 6 ಗಂಟೆಗೆ ಆಳಂದ ರಸ್ತೆಯ ಇಂಡೋ ಕಿಡ್ಸ್ ಪ್ಲೆ ಹೋಮ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಎಂ.ಎಲ್.ಸಿಗಳಾದ ಶ್ರೀಯುತ ಶಶೀಲ್ ನಮೋಶಿ ಉದ್ಛಾಟಿಸಿದರು. ಮುಖ್ಯ ಅತಿಥಿಗಳಾಗಿ ಡಿಡಿಪಿಐ ಅಶೋಕ ಭಜಂತ್ರಿ, ಬಿಇಒ ಶಿವಶರಣಪ್ಪ ಬನ್ನಿಕಟ್ಟಿ, ಆಳಂದ ಬಿಇಒ ಭರತರಾಜ ಸಾವಳಗಿ, ಯೋಜನಾ ಉಪ ಸಮನ್ವಯ ಅಧಿಕಾರಿ ಸಿ.ಬಿ. ಪಾಟೀಲ್, ಕಲ್ಯಾಣ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಂ.ಎನ್ ಪಾಟೀಲ್, ಎಸ್.ಎಸ್.ಎಲ್.ಸಿ ಪರೀಕ್ಷೆ ನೋಡಲ್ ಅಧಿಕಾರಿಗಳಾದ ರಮೇಶ ಜಾನಕರ್, ಕೆ. ಬಸವರಾಜ, ಮುಕುಂದಪ್ಪ ನಂದಗಾಂವ್, ಎಚ್.ಬಿ.ಪಾಟೀಲ್, ಸಮಗ್ರ ಶಿಕ್ಷಣದ ತಾಂತ್ರಿಕ ಸಹಾಯಕರಾದ ಚಂದ್ರಶೇಖರ್ ಪಾಟೀಲ್ ಪಾಲ್ಗೊಂಡಿದ್ದರು.

ಶ್ರೀಯುತ ಮಹೇಶ ಬಸರಕೋಡ್‌ರವರು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಸಂಜೀವ್ ಕುಮಾರ್ ಪಾಟೀಲ್‌ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕರಾದ ಚಂದ್ರಕಾಂತ್ ಬಿರಾದರ್ ರವರು ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದರು.

ಚಿಕ್ಕೋಡಿ
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಚಿಕ್ಕೋಡಿ ಜಿಲ್ಲಾ ಘಟಕ ಮತ್ತು ಉಪನಿರ್ದೇಶಕರ ಕಛೇರಿ, ಸಾ.ಶಿ.ಇ.ಚಿಕ್ಕೋಡಿ ೦೧.೦೭.೨೧ರಂದು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಫೋನ್ ಇನ್ ಪ್ರೋಗ್ರಾಮ್ ಉದ್ಘಾಟನಾ ಸಮಾರಂಭವನ್ನು ಶ್ರೀ ಗಜಾನನ ಮಣ್ಣಿಕೇರಿ ಉಪನಿರ್ದೇಶಕರು ನೆರವೇರಿಸಿಕೊಟ್ಟರು.

ವಿಷಯ ಪರಿವೀಕ್ಷಕರಾದ ಶ್ರೀಯುತ ಹರಿಹಂತ್ ಬಿರಾದಾರ್ ಪಾಟೀಲ್ ರವರು ಸಭೆಯಲ್ಲಿ ಹಾಜರಿದ್ದವರನ್ನು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಹಲಗೌಡ ಸೊಲ್ಲಾಪುರೆಯವರ ವಂದನಾರ್ಪಣೆ ಮೂಲಕ ಕಾರ್ಯಕ್ರಮಕ್ಕೆ ಇತಿಶ್ರೀ ಹಾಡಲಾಯಿತು.

ಬೆಂಗಳೂರು ದಕ್ಷಿಣ ಜಿಲ್ಲೆ
1-7-2021 ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಸಾ.ಶಿ.ಇಲಾಖೆಯ ಉಪ ನಿರ್ದೇಶಕರಾದ ಶ್ರೀ ರಾಜೇಂದ್ರ ಸರ್ ಪೋನ್ ಇನ್ ಕಾರ್ಯಕ್ರಮದ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡುವುದರ ಮೂಲಕ ಉದ್ಘಾಟಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಚಿದಾನಂದ ಪಾಟೀಲ, ರಾಜ್ಯ ಖಜಾಂಚಿ ಜೆ.ಎಂ ಜೋಷಿ, ಜಿಲ್ಲಾ ಕಾರ್ಯದರ್ಶಿ ವಿ.ಡಿ.ಭಟ್, ಜಿಲ್ಲಾ ಖಜಾಂಚಿ ಶ್ರೀಮತಿ ಮಾಯಾ ಪ್ರಭು, ಉತ್ತರ ಜಿಲ್ಲಾ ಅಧ್ಯಕ್ಷರು ಗಂಗಪ್ಪ, ಶಿಕ್ಷಕ ಸಂಘದ ಪ್ರಮುಖರಾದ ಚನ್ನಕೃಷ್ಣಪ್ಪ ಮತ್ತು ಉಪನಿರ್ದೇಶಕರ ಕಚೇರಿಯ ಇ.ಓ ಹಾಗೂ ಶಿಲ್ಪಕಲಾ ಎ.ಪಿ.ಸಿ ಇವರು ಉಪಸ್ಥಿತರಿದ್ದರು.

ಚಿತ್ರದುರ್ಗ
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪೋನ್ ಇನ್ ನೇರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ದಿನಾಂಕ ೧೨.೦೭.೨೧ರಂದು ಚಿತ್ರದುರ್ಗದಲ್ಲಿ ಉಪನಿರ್ದೇಶಕರ ಕಛೇರಿಯ ಸರ್ವಶಿಕ್ಷಣ ಅಭಿಯಾನದ ಸಭಾಂಗಣದಲ್ಲಿ ಜರುಗಿತು.

ಶ್ರೀ ಕೆ. ರವಿಶಂಕರ್ ರೆಡ್ಡಿ, ಮಾನ್ಯ ಉಪನಿರ್ದೇಶಕರು, ಸಾ.ಶಿ.ಇ. ಚಿತ್ರದುರ್ಗ, ಶ್ರೀ ಎಸ್.ಕೆ.ಬಿ ಪ್ರಸಾದ್, ಪ್ರಾಂಶುಪಾಲರು, ಡಯಟ್, ಚಿತ್ರದುರ್ಗ, ಶ್ರೀ ಬಿ.ಎಂ.ಎಸ್ ವೃಷಭೇಂದ್ರಸ್ವಾಮಿ, ರಾಜ್ಯ ಕಾರ್ಯದರ್ಶಿ ಮಾಧ್ಯಮಿಕ ಶಿಕ್ಷಕ ಸಂಘ, ಶ್ರೀ ಎಸ್. ಜಯಣ್ಣ, ಅಧ್ಯಕ್ಷರು ಪ್ರೌಢಶಾಲಾ ಸಹಶಿಕ್ಷಕ ಸಂಘ, ಚಿತ್ರದುರ್ಗ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ವಿಷಯಗಳ ವಿಷಯತಜ್ಞರು ಭಾಗವಹಿಸಿದ್ದರು.

Highslide for Wordpress Plugin