ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ಫುಡ್ ಕಿಟ್ ವಿತರಣೆ

ಕೋವಿಡ್ -19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾದ ಬೆಂಗಳೂರು ಉತ್ತರ ಜಿಲ್ಲೆಯ ಕೆಲವು ಖಾಸಗಿ ಶಾಲಾ ಶಿಕ್ಷಕರಿಗೆ ಆಹಾರ ವಿತರಣಾ ಕಾರ್ಯಕ್ರಮ ನಡೆಯಿತು.

ದಿನಾಂಕ 25-06-2021 ರಂದು ನಮ್ಮ ಸಂಘದ ಕೇಂದ್ರ ಕಛೇರಿಯಲ್ಲಿ (ಬೆಂಗಳೂರು) ಸರಳವಾಗಿ ಸರ್ಕಾರದ ಎಲ್ಲಾ ನಿಯಮಗಳನ್ನೂ ಅನುಸರಿಸುವುದರೊಂದಿಗೆ ಈ ಕಾರ್ಯಕ್ರಮ ನಡೆಯಿತು. ನಮ್ಮ ಸಂಘದ ಹಿರಿಯರು ಹಾಗೂ ಕಾರ್ಯಾಲಯ ಪ್ರಮುಖರಾದ ಶ್ರೀ ಜಿ ಎಸ್ ಕೃಷ್ಣಮೂರ್ತಿಯವರು ಈ ಸತ್ಕಾರ್ಯವನ್ನು ನಡೆಸಿಕೊಟ್ಟರು.

ಶ್ರೀಯುತರು ಸ್ವಂತ ಹಣವನ್ನು ವಿನಿಯೋಗಿಸಿ ಸಂತ್ರಸ್ತರಿಗೆ ಆಹಾರದ ನೆರವು ನೀಡಿದ್ದು ವಿಶೇಷ. ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ ಎಂಬ ಉಕ್ತಿಯನ್ನು ನಾವು ಇಲ್ಲಿ ಸ್ಮರಿಸುತ್ತಾ ಶ್ರೀಯುತರಿಗೆ ಆ ಭಗವಂತನು ಉತ್ತಮ ಆರೋಗ್ಯ ನೀಡಲೆಂದು ಸಂಘವು ಪ್ರಾರ್ಥಿಸುತ್ತದೆ ಮತ್ತು ಅನಂತ ಕೃತಜ್ಞತೆಗಳನ್ನು ಸಲ್ಲಿಸುತ್ತದೆ.

ಫಲಾನುಭವಿಗಳು ಸಂಘದ ವತಿಯಿಂದ ನಡೆದ ಈ ಕಾರ್ಯವನ್ನು ಮನಸಾ ಶ್ಲಾಘಿಸಿ, ಸಂಘಕ್ಕೆ ಸದಾ ಚಿರಋಣಿಗಳಾಗಿ ಇರುತ್ತೇವೆ ಎಂದು ಹೇಳಿದ್ದು ಅತ್ಯಂತ ಭಾವಪೂರ್ಣವಾಗಿತ್ತು. ಸಭೆಯಲ್ಲಿ ಶ್ರೀ ಜಿ. ಎಸ್ ಕೃಷ್ಣ ಮೂರ್ತಿ, ಶ್ರೀ ಜೆ, ಎಮ್ ಜೋಶಿ, ಶ್ರೀ ಗಂಗಪ್ಪ, ಶ್ರೀ ನಾರಾಯಣ ಭಟ್ಟ, ಶ್ರೀ ಹರಿದಾಸ ಮುಂತಾದವರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಚೆಂದಗಾಣಿಸಿದರು.

ವರದಿ- ನಾರಾಯಣ ಭಟ್ಟ ಕಾರ್ಯದರ್ಶಿ,ಬೆಂಗಳೂರು ಉತ್ತರ ಜಿಲ್ಲೆ

Highslide for Wordpress Plugin