ಶಿಕ್ಷಕ ಸಂಘದಿಂದ ಮಾನ್ಯ ಶಿಕ್ಷಣ ಸಚಿವರಿಗೆ ಮನವಿ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪದಾಧಿಕಾರಿಗಳು 1-7-2021 ರಂದು ಮಾನ್ಯ ಶಿಕ್ಷಣ ಮಂತ್ರಿಗಳಾದ ಶ್ರೀ ಎಸ್. ಸುರೇಶ ಕುಮಾರ ಅವರನ್ನು ಭೇಟಿ ಮಾಡಿ, ಶಿಕ್ಷಕರ ವರ್ಗಾವಣೆ ವೇಳಾಪಟ್ಟಿಯನ್ನು ಪರಿಷ್ಕರಿಸಿ 45 ದಿನಗಳಿಗೆ ಮಿತಿಗೊಳಿಸಿ ಆದೇಶಿಸುವಂತೆ ಮನವಿ ಮಾಡಲಾಯಿತು.

ಕ.ರಾ.ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಾಧ್ಯಕ್ಷರು ಹಾಗೂ ಎಂ.ಎಲ್.ಸಿ ಆಗಿರುವ ಶ್ರೀಯುತ ಅರುಣ ಶಹಾಪುರ, ಎಂ.ಎಲ್.ಸಿ.ಗಳಾದ ಶ್ರೀಯುತ ಎಸ್.ವಿ ಸಂಕನೂರ, ಕ.ರಾ.ಮಾ.ಶಿ.ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಚಿದಾನಂದ ಪಾಟೀಲ, ರಾಜ್ಯ ಖಜಾಂಚಿಗಳಾದ ಶ್ರೀಯುತ ಜೆ. ಎಂ. ಜೋಷಿ, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷರಾದ ಶ್ರೀಯುತ ಗಂಗಪ್ಪ, ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀಯುತ ವಿ.ಡಿ.ಭಟ್ ಉಪಸ್ಥಿತರಿದ್ದರು.

Highslide for Wordpress Plugin