ಗುರುವಂದನಾ ಕಾರ್ಯಕ್ರಮ – ಗುಲ್ಬರ್ಗ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಜಿಲ್ಲಾ ಘಟಕ ಕಲ್ಬುರ್ಗಿ ವತಿಯಿಂದ ಆರ್ ಜೆ ಪಿಯು ಕಾಲೇಜಿನಲ್ಲಿ ಗುರುವಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಕರ್ನಾಟಕ ಪ್ರಾಂತ ಬೌದ್ಧಿಕ ಪ್ರಮುಖರಾದ ಶ್ರೀ ಕೃಷ್ಣ ಜೋಶಿಯವರು ಮಾತನಾಡುತ್ತಾ ಆಷಾಡ ಮಾಸ ಶುಕ್ಲಪಕ್ಷದ ಹುಣ್ಣಿಮೆಯ ದಿವಸವನ್ನು ಗುರುಪೌರ್ಣಿಮೆ ಎಂದು ಆಚರಿಸುವ ಸಂಪ್ರದಾಯ ಅನಾದಿ ಕಾಲದಿಂದಲೂ ಇದೆ. ಮಹರ್ಷಿ ವೇದವ್ಯಾಸರೇ ಈ ಗುರುಪರಂಪರೆಗೆ ಬುನಾದಿ ಹಾಕಿದ್ದಾರೆ ಎಂದು ಹೇಳಿದರು. ಗುರುಪರಂಪರೆ ಭಾರತದಲ್ಲಿ ಅತ್ಯಂತ ಅದ್ಭುತವಾಗಿದೆ, ಗುರು-ಶಿಷ್ಯರ ಪರಂಪರೆಯಲ್ಲಿ ಎರಡು ಗುಂಪುಗಳಿವೆ. ಶಿಷ್ಯರು ಗುರುಗಳು ಹೇಳಿರುವುದನ್ನು ಯೋಚಿಸದೆ ತಕ್ಷಣ ಕಾರ್ಯಪ್ರವೃತ್ತರಾಗುವ ಒಂದು ಗುಂಪು, ಗುರುಗಳನ್ನು ಪರೀಕ್ಷಿಸಿ ಶಿಷ್ಯರಾಗುವುದು ಇನ್ನೊಂದು ಗುಂಪು. ಸ್ವಾಮಿವಿವೇಕಾನಂದರು ರಾಮಕೃಷ್ಣರನ್ನು ಪರೀಕ್ಷಿಸಿ ಗುರುಗಳಾಗಿ ಸ್ವೀಕರಿಸಿದರು. ಬ್ರಹ್ಮ, ವಿಷ್ಣು, ಮಹೇಶ್ವರಗಿಂತ ಹೆಚ್ಚು ಶಕ್ತಿ ಗುರುವಿಗೆ ಇದೆ. ಇದನ್ನು ಅರಿತೇ ಹರ ಮುನಿದರೆ ಗುರು ಕಾಯುವನು ಎಂಬ ಗಾದೆ ಮಾಡಿದ್ದಾರೆ. ಅಂದರೆ ದೇವರು ಮುನಿದಾಗ ಶಿಷ್ಯನನ್ನು ಕಾಪಾಡುವುದಕ್ಕಾಗಿ ದೇವರನ್ನು ಎದುರು ಹಾಕಿಕೊಂಡು ಗುರು ರಕ್ಷಣೆ ಮಾಡುತ್ತಾನೆ. ಜಾತಿಯಿಂದ ಯಾರೂ ದೊಡ್ಡವರಲ್ಲ, ಕೃತಿಯಿಂದ ದೊಡ್ಡವರು. ಅದಕ್ಕಾಗಿ ಅಂಬೇಡ್ಕರ್ ಸಂವಿಧಾನ ರಚಿಸಿದರು. ವ್ಯಾಸರು ಮಹಾಭಾರತ ಬರೆದರು, ವಾಲ್ಮೀಕಿ ರಾಮಾಯಣ ಬರೆದರು. ಇವರೆಲ್ಲ ತಮ್ಮ ಪ್ರತಿಭೆಯಿಂದ ಗುರುತಿಸಿಕೊಂಡವರು ಎಂದು ಅಭಿಪ್ರಾಯಪಟ್ಟರು. ಗುರು ತನ್ನಿಂದ ಸಾಧ್ಯವಾಗದ ಕೆಲಸವನ್ನು ಶಿಷ್ಯರಿಂದ ಮಾಡಿಸುತ್ತಾನೆ ಉದಾಹರಣೆಗೆ ರಾಮಕೃಷ್ಣ ಪರಮಹಂಸರು ಸ್ವಾಮಿವಿವೇಕಾನಂದರಿಂದ ವಿಶ್ವವನ್ನೇ ಗೆದ್ದು ಜಗತ್ತಿನಲ್ಲಿ ಭಾರತವನ್ನು ಧ್ರುವತಾರೆ ಮಾಡಿದರು ಎಂದು ಹೇಳಿದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಜಿಲ್ಲಾ ಘಟಕ ಕಲ್ಬುರ್ಗಿ ಇವರು ಮಾಡಿರುವ ಗುರುವಂದನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿz. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ಸುಮಾರು ಐವತ್ತಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಇದು ಶಿಕ್ಷಕರ ಸಮಸ್ಯೆಗಳ ಕುರಿತು ಕೇವಲ ಹೋರಾಟವನ್ನು ರೂಪಿಸುವುದಷ್ಟೇ ಅಲ್ಲದೇ, ಭಾರತೀಯ ಸಂಸ್ಕೃತಿಯನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. ಇದರ ಮೂಲಕ ಸಾವಿರಾರು ಶಿಕ್ಷಕರು ಸಮಾಜ ಮತ್ತು ದೇಶಕ್ಕೆ ಮಾದರಿಯಾಗಿದ್ದಾರೆ. ಈ ಕಾರ್ಯಕ್ರಮದ ಸಾರ್ಥಕತೆಯೂ ಬಂದಿರುವ ಶಿಕ್ಷಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದಾಗ ಅರ್ಥಪೂರ್ಣವಾಗುವುದು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಸಹಾಯಕ ನಿರ್ದೇಶಕರು, ಅಪರ ಆಯುಕ್ತರ ಕಾರ್ಯಾಲಯ ಕಲ್ಬುರ್ಗಿಯ ಶ್ರೀ ಚನ್ನಬಸಪ್ಪ ಮುಧೋಳ ಅವರು ಶಿಕ್ಷಕ ಮತ್ತು ಗುರು ಈ ಎರಡು ಪದಗಳ ಮಧ್ಯೆ ಇರುವ ವ್ಯತ್ಯಾಸವರಿಯಬೇಕು. ಮೊದಲು ಗುರುಗಳಾಗಿ ಅನಂತರ ಶಿಕ್ಷಕರಾಗುವವರು ಈ ಜಗತ್ತನ್ನೇ ಬದಲಾಯಿಸುವ ಶಕ್ತಿ ಹೊಂದುತ್ತಾರೆ. ಇಂತಹ ಸಾಮರ್ಥ್ಯ ಇರುವುದು ಶಿಕ್ಷಕರಿಗೆ ಮಾತ್ರ. ಶಿಕ್ಷಕರಾದ ನಾವು ನಮಗಾಗಿ ಅಲ್ಲದೆ ನಮ್ಮನ್ನು ಬೆಳೆಸಿದ ಸಮಾಜ, ದೇಶವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಹೊರಬೇಕು ಎಂದರು.

ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಬುರ್ಲಿ ಪ್ರಹ್ಲಾದರವರು ಶಿಕ್ಷಕರು ಪಾಠ ಮಾಡುವಾಗ ತನ್ನ ಮಕ್ಕಳೆಂದು ತಿಳಿದು ಮಾಡಿದಾಗ ಮಾತ್ರ ಸಾರ್ಥಕವಾಗುತ್ತದೆ ಎಂದು ಹೇಳಿದರು. ಕರ್ನಾಟಕ ರಾಜ್ಯ ಮಾಧ್ಯಮ ಶಿಕ್ಷಕ ಸಂಘದ ವಿಭಾಗ ಪ್ರಮುಖ ಶ್ರೀ ಮಹೇಶ ಬಸರಕೋಡ ಪ್ರ್ರಾಸ್ತಾವಿಕವಾಗಿ ಮಾತನಾಡಿ ಮಾಧ್ಯಮಿಕ ಶಿಕ್ಷಕ ಸಂಘವು ಸುಮಾರು ಐವತ್ತಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಇದು ಕೇವಲ ಶಿಕ್ಷಕರ ಸಮಸ್ಯೆಗಳ ಕುರಿತು ಹೋರಾಟವನ್ನು ರೂಪಿಸುವುದಷ್ಟೇ ಅಲ್ಲದೆ, ಭಾರತೀಯ ಸಂಸ್ಕೃತಿಯನ್ನು ಬೆಳೆಸುವ ಕಾರ್ಯವನ್ನು ಮಾಡುತ್ತದೆ ಹಾಗೂ ಶಿಕ್ಷಕರಿಗಾಗಿ ಸಂಕಲ್ಪದಿನ, ಸದಸ್ಯತ್ವ ಅಭಿಯಾನ, ಶಿಕ್ಷಕರಿಗೆ ತರಬೇತಿ ಕಾರ್ಯಾಗಾರಗಳು, ಪ್ರತಿಭಾ ಪುರಸ್ಕಾರ ಹೀಗೆ ವಿವಿಧ ಆಯಾಮಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಕರು ಆತ್ಮವಿಮರ್ಶೆ ಮಾಡಿಕೊಂಡು ಕಾರ್ಯನಿರ್ವಹಿಸಬೇಕು. ಮಾನ್ಯ ಶ್ರೀ ಕೃ ನರಹರಿ ಅವರಂತಹ ಹಿರಿಯರ ಸ್ಪೂರ್ತಿಯ ಮೂಲಕ ಸಂಘವು ಈ ಕಾರ್ಯವನ್ನು ಮಾಡುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಚಂದ್ರಶೇಖರ್ ಪಾಟೀಲ್, ಉಪಾಧ್ಯಕ್ಷರಾದ ಚಂದ್ರಶೇಖರ್ ಗೋಸಲ್ ಕಾರ್ಯದರ್ಶಿ ಶ್ರೀ ಸಂಜುಕುಮಾರ್ ಪಾಟೀಲ್ ಹಾಗೂ ವಿವಿಧ ಶಿಕ್ಷಕ ಉಪನ್ಯಾಸಕ ಬಂಧುಗಳು ಭಾಗವಹಿಸಿದ್ದರು.

Highslide for Wordpress Plugin