ಗುರುವಂದನಾ ಕಾರ್ಯಕ್ರಮ – ಮೈಸೂರು

ಕರೋನ ಭೀತಿಯ ನಡುವೆ ಪ್ರತಿ ವರ್ಷದಂತೆ “ಗುರುವಂದನ “ಕಾರ್ಯಕ್ರಮವನ್ನು ಮಾಡಲು 11-08-2021 ರಂದು ಸಂಘದ ಪದಾಧಿಕಾರಿಗಳು ಬೈಠಕ್ ಮಾಡಿ 13-08-2021 ರಂದು ಕಾರ್ಯಕ್ರಮವನ್ನು ಮಾಡಲು ತೀರ್ಮಾನಿಸಿ ಅದರಂತೆ ಒಂದು ದಿನದಲ್ಲಿ ಪೋನ್ ಕರೆಯ ಮೂಲಕ ೬೫ ಸಂಖ್ಯೆಯ ಉಪನ್ಯಾಸಕರು, ಶಿಕ್ಷಕರು, ಪ್ರಾಂಶುಪಾಲರನ್ನು ಸೇರಿಸಿದ್ದು ತುಂಬಾ ಸಂತೋಷದ ಸಂಗತಿ. ವಿಶೇಷವಾಗಿ ಜವಾಬ್ದಾರಿಯನ್ನು ನಿರ್ವಹಿಸಿದ ಸಂಘದ ಪ್ರಧಾನಕಾರ್ಯದರ್ಶಿ ಶ್ರೀ ಉದಯರವಿಪ್ರಕಾಶ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯವರ ಆಪೇಕ್ಷೆಗೂ ಮೀರಿದ ಸಂಖ್ಯೆ ಸೇರಿಸುವಲ್ಲಿ ಶ್ರಮವಹಿಸಿದ್ದು ಅವರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ವೇದಿಕೆಯಲ್ಲಿ ಶ್ರೀ ಶಿವಾನಂದ ಸಿಂಧನಕೇರಾ ರಾ.ಪ್ರ ಕಾರ್ಯದರ್ಶಿಗಳು ಂಃಖSಒ, ದೆಹಲಿ, ಮುಖ್ಯ ಅತಿಥಿಗಳಾಗಿ ಶ್ರೀ ನಾಗಮಲ್ಲೇಶ್, ಉಪನಿರ್ದೇಶಕರು ಪ.ಪೂ ಶಿ ಇಲಾಖೆ, ಚಾಮರಾಜನಗರ. ಶ್ರೀ ಮಂಜುನಾಥ, ಗೋಪಾಲ ಶಿಕ್ಷಣಸಂಸ್ಥೆ, ಮೈಸೂರು, ಶ್ರೀ ಜಯದೇವರಾಜೇ ಅರಸ್, ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಮೈಸೂರು ಉಪಸ್ಥಿತರಿದ್ದು ಸಂಘಟನೆಯ ಎಲ್ಲ ಪದಾಧಿಕಾರಿಗಳ ಸಂಯೋಜನೆ, ಸಹಮತದಂತೆ ಕಾರ್ಯಕ್ರಮವು ಯಶಸ್ವಿಯಾಯಿತು.

Highslide for Wordpress Plugin