ಕ.ರಾ.ಮಾ.ಶಿ. ಸಂಘ ಕೇಂದ್ರದ ಪದಾಧಿಕಾರಿಗಳಿಂದ ಶಿಕ್ಷಣ ಸಚಿವರಾದ ಶ್ರೀ ಬಿ. ಸಿ ನಾಗೇಶ್‌ರವರಿಗೆ ಮನವಿ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪದಾಧಿಕಾರಿಗಳು ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ.ನಾಗೇಶ ಅವರನ್ನು ಭೇಟಿ ಮಾಡಿ,

* ಸಂಸ್ಕೃತ ವಿಷಯದ ವಿಧ್ಯಾರ್ಥಿಗಳ ಶಿಷ್ಯವೇತನಕ್ಕೆ ಪ್ರತ್ಯೇಕ ಹೆಡ್ ರಚನೆ.
* ಕೋವಿಡ್ ಕಾರ್ಯ ಮಾಡಿದ ಪಿ.ಯು. ಅನುದಾನಿತ ಉಪನ್ಯಾಸಕರಿಗೆ ಗಳಿಕೆ ರಜೆ ನೀಡುವುದು.
* ಜೆ.ಓ.ಸಿ.ಯಿಂದ ವಿಲೀನವಾದ ಉಪನ್ಯಾಸಕರಿಗೆ ಬಿ.ಇಡಿ. ಮಾಡಿಸುವ ಬಗ್ಗೆ. ಹೀಗೆ ಅನೇಕ ಶೈಕ್ಷಣಿಕ ಸಮಸ್ಯೆಗಳನ್ನು ಚರ್ಚಿಸಿದರು.

ಜೊತೆಯಲ್ಲಿ ಮಾಧ್ಯಮಿಕ ಶಿಕ್ಷಕ ಸಂಘದಿಂದ ನಡೆಯುತ್ತಿರುವ ಪೋನ್ ಇನ್ ಕಾರ್ಯಕ್ರಮ ಮತ್ತು ನನ್ನ ಶಾಲೆ ನನ್ನ ತೀರ್ಥ ಕ್ಷೇತ್ರ ಕಾರ್ಯಕ್ರಮದ ಬಗ್ಗೆಯೂ ಮಂತ್ರಿಗಳಿಗೆ ವಿವರ ನೀಡಲಾಯಿತು. ಮಂತ್ರಿಗಳು ಈ ಎರಡೂ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Highslide for Wordpress Plugin