ಶ್ರದ್ಧಾಂಜಲಿ

ಶ್ರೀ ಶಾಂತಕುಮಾರ ಬಿರಾದಾರ
ದಿನಾಂಕ 17-01-2023 ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೀದರ್ ಜಿಲ್ಲಾ ಅಧ್ಯಕ್ಷರಾಗಿದ್ದ ಶ್ರೀ ಶಾಂತಕುಮಾರ ಬಿರಾದಾರ ರವರು ಹೃದಯಾಘಾತದಿಂದ ನಿಧನರಾದರು. ಅತ್ಯಂತ ಕ್ರಿಯಾಶೀಲರಾಗಿ, ಉತ್ಸಾಹದಿಂದ ಜಿಲ್ಲೆಯ ಎಲ್ಲಾ ಕಾರ್ಯಕರ್ತರನ್ನು ಸಂಘಟನೆಯ ಎಲ್ಲಾ ಕೆಲಸಗಳಲ್ಲಿ ತೊಡಗಿಸುತ್ತಿದ್ದರು. ಆಕಸ್ಮಿಕವಾಗಿ ನಮ್ಮನ್ನೆಲ್ಲಾ ಅಗಲಿರುವುದು ಶಿಕ್ಷಕ ಸಂಘಟನೆಗೆ ತುಂಬಲಾರದ ನಷ್ಟ. ಭಗವಂತನು ಮೃತರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಹಾಗೆಯೇ ಪರಿವಾರದವರಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ. ಮೃತರ ಪರಿವಾರದೊಂದಿಗೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಎಂದೆಂದಿಗೂ ಜೊತೆಯಾಗಿರುತ್ತದೆ.

ಶ್ರೀ ಚಂದ್ರಶೇಖರ್
ದಿನಾಂಕ 11-01-2023 ರಂದು ಶ್ರೀ ಚಂದ್ರಶೇಖರ್, ಖಜಾಂಚಿ, ಬೆಂಗಳೂರು ಉತ್ತರ ಜಿಲ್ಲೆ ಇವರು ಸ್ವರ್ಗಸ್ಥರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಸಂಘಟನೆಯಲ್ಲಿ ಕ್ರಿಯಾ ಶೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಯುತರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲೆಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ಪ್ರಾರ್ಥಿಸುತ್ತದೆ.

Highslide for Wordpress Plugin