ಬೀದರ್‌ನಲ್ಲಿ ಸಂಕಲ್ಪ ದಿನಾಚರಣೆ

ದಿನಾಂಕ 23-1-2017 ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೀದರ ಜಿಲ್ಲಾ ಘಟಕ ಹಾಗೂ ಪದವಿ ಪೂರ್ವ ಉಪನ್ಯಾಸಕರ ಸಂಘ ಬೀದರ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಸ್ವಾಮಿವಿವೇಕಾನಂದ ಹಾಗೂ ಸುಭಾಷಚಂದ್ರ ಬೋಸ್ ಜಯಂತಿ ನಿಮಿತ್ತ ಸಂಕಲ್ಪ ದಿನ ಆಚರಣೆ ವಿಜೃಂಭಣೆಯಿಂದ ಮಾಡಲಾಯಿತು.

Bidar

ಈ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಜ್ಯೋತಿರ್ಮಯಾನಂದ ಸ್ವಾಮಿಜಿ, ರಾಮಕೃಷ್ಣ ವಿವೇಕಾನಂದ ಆಶ್ರಮ ಬೀದರ ಸಾನಿಧ್ಯ ವಹಿಸಿ ವಿವೇಕಾನಂದರನ್ನು ಕುರಿತು ಮಾತನಾಡಿದರು ಹಾಗೂ ಸುಮಾರು 400 ಶಿಕ್ಷಕರಿಗೆ ಸಂಕಲ್ಪ ಬೋಧಿಸಿದರು. ಇದೇ ವೇಳೆ ವಿಧಾನ ಪರಿಷತ್ ಸದಸ್ಯರಾದ ಮಾನ್ಯ ಶ್ರೀ ಅಮರನಾಥ ಪಾಟೀಲರು ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಕ್ಷಕರ ಸಂಘಟನೆಗಳು ಈ ತರಹದ, ಸೃಜನಾತ್ಮಕ ಹಾಗೂ ಮಹನೀಯರ ಆದರ್ಶ ಶಿಕ್ಷಕರಿಗೆ ನೀಡುವುದು ಈ ಸಮಯದಲ್ಲಿ ಬಹಳ ಪ್ರಸ್ತುತವಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಡೈರಿ ಹಾಗೂ ಉಪನ್ಯಾಸಕ ಸಂಘದ 2017 ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಬೀದರ ಜಿಲ್ಲಾ ಪ.ಪೂ ಇಲಾಖೆಯ ಉಪನಿರ್ದೇಶಕರಾದ ಶ್ರೀ ಶಿವರಾಜ ಪಾಟೀಲ, ಸಾ.ಶಿ.ಇ ಉಪನಿರ್ದೇಶಕರಾದ ಶ್ರೀ ಶಿವಕುಮಾರ, ವಿಭಾಗ ಪ್ರಮುಖ ಶ್ರೀ ಮಹೇಶ ಬಸರಕೋಡ, ಶ್ರೀ ಶ್ಯಾಮರಾವ ಬಿರಾದರ್, ವಿಠಲದಾಸ ಪ್ಯಾಗೆ, ರಾಜಶೇಖರ ಮಂಗಲಗಿ, ಹಣಮಂತ ನಿರಾಣಿ, ಮೈಲಾರೆ ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಶಾಂತಕುಮಾರ ಬಿರಾದಾರ ಸ್ವಾಗತಿಸಿದರು ಹಾಗೂ ಶ್ರೀ ಶಿವಕುಮಾರಸಾಲಿ ಕಾರ್ಯವನ್ನು ನಿರೂಪಿಸಿದರು. ಶ್ರೀ ರಾಜಶೇಖರ ಮಂಗಲಗಿ ವಂದಿಸಿದರು.

Highslide for Wordpress Plugin