ದೈಹಿಕ ಶಿಕ್ಷಕರ ಕಾರ್ಯಾಗಾರ

ದಿನಾಂಕ 30-9-2018 ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ರಾಜ್ಯಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ವಿರೂಪಾಕ್ಷ ಅವರು ಸಮಗ್ರ ವೈದ್ಯನಾಥನ್ ವರದಿ ಮತ್ತು ದೈಹಿಕ ಶಿಕ್ಷಣ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶ್ರೀ ಅರುಣ ಶಹಾಪೂರ ಅವರು ಶಿಕ್ಷಕರ ಸಮಸ್ಯೆಗಳ ಕುರಿತು ಚರ್ಚಿಸಿದರು ಮತ್ತು ಈ ವೇದಿಕೆಯ ಮುಖಾಂತರ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಮಾರ್ಗದರ್ಶನ ನೀಡಿದರು.

PT Workshop (3)

PT Workshop (4)

PT Workshop (5)

PT Workshop (6)

PT Workshop (1)

PT Workshop (2)

ಈ ಕಾರ್ಯಕ್ರಮದಲ್ಲಿ ಶ್ರೀ ಕೃ. ನರಹರಿ ಜಿ , ಶ್ರೀ ಸಂದೀಪ ಬೂದಿಹಾಳ, ಅರುಣ ಶಹಾಪುರ, ಶ್ರೀ ಶಿವಾನಂದ ಸಿಂಧನಕೇರಾ, ಶ್ರೀ ಚಿದಾನಂದ ಪಾಟೀಲ, ಶ್ರೀ ಗಂಗಾಧರ್ ಹಾಗೂ ದೈಹಿಕ ಶಿಕ್ಷಕ ಸಂಘದ ಶ್ರೀನಿವಾಸಗೌಡರು ಮತ್ತು ವಿವಿಧ ಜಿಲ್ಲೆಗಳಿಂದ ಸುಮಾರು 125 ಸಂಖ್ಯೆ ದೈಹಿಕ ಶಿಕ್ಷಕರು ಭಾಗವಹಿಸಿದ್ದರು. ಮಾಧ್ಯಮಿಕ ಶಿಕ್ಷಕ ಸಂಘದ ದೈಹಿಕ ಶಿಕ್ಷಣ ರಾಜ್ಯ ಸಂಚಾಲಕರಾಗಿ ಶ್ರೀಸುರೇಂದ್ರ ಅವರನ್ನು ಮತ್ತು ಸಹ ಸಂಚಾಲಕರಾಗಿ ಶ್ರೀ ಮಹೇಶ ರುದ್ರಗೌಡ ಬಸರಕೋಡ ಅವರಿಗೆ ಜವಾಬ್ದಾರಿ ವಹಿಸಲಾಯಿತು.

ವರದಿ : ಮಹೇಶ್ ಬಸರಕೋಡ್

Highslide for Wordpress Plugin