ಚಿತ್ರದುರ್ಗದಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ

ಚಿತ್ರದುರ್ಗದಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ

ಶ್ರೀ ಕೃ. ನರಹರಿಯವರು ಶಾಸಕರಾಗಿದ್ದಾಗ ಶಾಸಕರ ಭವನದ ಎಲ್.ಹೆಚ್ ಕೊಠಡಿ ನಮ್ಮಂತಹ ಶಿಕ್ಷಕರುಗಳಿಗೆ ಬೆಂಗಳೂರಿಗೆ ಬಂದಾಗ ಮನೆಯಾಗಿತ್ತು. ಅಲ್ಲದೇ ಸ್ವತಃ ಅವರೇ ಮೆಜಿಸ್ಟಿಕ್‌ಗೆ ಬಂದು ಶಿಕ್ಷಕರನ್ನು ತಮ್ಮ ಕಾರಿನಲ್ಲಿ ಹತ್ತಿಸಿಕೊಂಡು ಹೋಗಿ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿಮಾಡಿಸಿ, ಸಮಸ್ಯೆ ಬಗೆಹರಿಸಿ ವಾಪಾಸು ಊರಿಗೆ ಹೋಗಲು ಬಸ್‌ಚಾರ್ಜ್‌ಗೆ ಹಣ ಇದೆಯಾ ಎಂದು ಶಿಕ್ಷಕರಿಗೆ ಕೇಳುತ್ತಿದ್ದರು. ಒಂದು ವೇಳೆ ಇಲ್ಲವೆಂದರೆ ಅವರೇ ಕೊಟ್ಟು ಕಳುಹಿಸುತ್ತಿದ್ದರು. ಇಂತಹ ಅಪರೂಪದ ಶಾಸಕರನ್ನು ನಾವು ಜೀವನದಲ್ಲಿ ಕಂಡೆವು ಅವರ ಜೀವನ ಶೈಲಿ ಮಾದರಿಯಾಗಿದೆ. ನಮ್ಮೆಲ್ಲರಿಗೆ ಅವರ […]

ಚಿತ್ರಕಲಾ ಶಿಕ್ಷಣ ಕುರಿತು ಒಂದು ದಿನದ ಚಿಂತನ-ಮಂಥನ

ಚಿತ್ರಕಲಾ ಶಿಕ್ಷಣ ಕುರಿತು ಒಂದು ದಿನದ ಚಿಂತನ-ಮಂಥನ

ಶಾಲಾ ಶಿಕ್ಷಣದಲ್ಲಿ ಚಿತ್ರಕಲೆ ವಿಷಯ ಅವಶ್ಯಕತೆ- ವಿಷಯವಾಗಿ ದಿನಾಂಕ 4-11-2018 ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಹಾಗು ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕ ಸಂಘಗಳ ಜಂಟಿ ಸಹಭಾಗಿತ್ವದಲ್ಲಿ ಒಂದು ದಿನದ ಕಾರ್ಯಕ್ರಮವಾಗಿ ಚಿಂತನ-ಮಂಥನ ಕಾರ್ಯಕ್ರಮ ನಡೆಸಲಾಯಿತು. ಆರಂಭದಲ್ಲಿ ಚಿತ್ರಕಲಾ ಶಿಕ್ಷಕರು ರಚಿಸಿರುವ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಪ್ರದರ್ಶನವನ್ನು ಮಾಧ್ಯಮಿಕ ಶಿಕ್ಷಕ ಸಂಘದ ಹಿರಿಯ ಮಾರ್ಗದರ್ಶಕರಾದ ಶ್ರೀಯುತ ಜಿ.ಎಸ್. ಕೃಷ್ಣಮೂರ್ತಿಯವರು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನಪರಿಷತ್ ಹಾಲಿ ಸದಸ್ಯರು ಮತ್ತು […]

ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ

ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ

ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ವತಿಯಿಂದ ದಿನಾಂಕ 1-4-2006 ರ ನಂತರ ವೇತನ ಪಡೆಯುತ್ತಿರುವ ಅನುದಾನಿತ ಶಾಲಾ ಕಾಲೇಜುಗಳ ನೌಕರರು ಸೇವೆಗೆ ಸೇರಿದ ದಿನಾಂಕವನ್ನು ಪರಿಗಣಿಸಿ, ಕಾಲ್ಪನಿಕ ವೇತನ ನಿಗದಿ ಮಾಡುವುದು ಹಾಗೂ ಹಳೆಯ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿ “ಬೃಹತ್ ಪ್ರತಿಭಟನೆ”ಯು ದಿನಾಂಕ 11-10-2018 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಿತು. ಈ ಪ್ರತಿಭಟನೆಗೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತು.

ದೈಹಿಕ ಶಿಕ್ಷಕರ ಕಾರ್ಯಾಗಾರ

ದೈಹಿಕ ಶಿಕ್ಷಕರ ಕಾರ್ಯಾಗಾರ

ದಿನಾಂಕ 30-9-2018 ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ರಾಜ್ಯಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ವಿರೂಪಾಕ್ಷ ಅವರು ಸಮಗ್ರ ವೈದ್ಯನಾಥನ್ ವರದಿ ಮತ್ತು ದೈಹಿಕ ಶಿಕ್ಷಣ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶ್ರೀ ಅರುಣ ಶಹಾಪೂರ ಅವರು ಶಿಕ್ಷಕರ ಸಮಸ್ಯೆಗಳ ಕುರಿತು ಚರ್ಚಿಸಿದರು ಮತ್ತು ಈ ವೇದಿಕೆಯ ಮುಖಾಂತರ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಮಾರ್ಗದರ್ಶನ ನೀಡಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಕೃ. ನರಹರಿ ಜಿ , ಶ್ರೀ ಸಂದೀಪ ಬೂದಿಹಾಳ, ಅರುಣ […]

ರಾಜ್ಯ ಮಹಿಳಾ ಮಿಲನ

ರಾಜ್ಯ ಮಹಿಳಾ ಮಿಲನ

ಪ್ರತಿಯೊಬ್ಬರ ಮೊದಲ ಹೀರೋಯಿನ್ ಎಂದರೆ ಅದು ತಾಯಿ, ನಂತರದ ಸ್ಥಾನ-ಶಿಕ್ಷಕಿ. ಶಿಕ್ಷಣ ಕ್ಷೇತ್ರದ ಬಗ್ಗೆ ನನಗೆ ತುಂಬಾ ಗೌರವವಿದೆ. ಶಿಕ್ಷಣ, ಕ್ಷೇತ್ರಕ್ಕೆ ಉತ್ತಮ ಪ್ರತಿನಿಧಿಗಳನ್ನು ಗುರುತಿಸಿ, ಆಯ್ಕೆ ಮಾಡಿ ಕಳುಹಿಸುವ ಜವಾಬ್ದಾರಿ ನಿಮ್ಮದು. ಏಕೆಂದರೆ ಎಲ್ಲ ಕ್ಷೇತ್ರಗಳಿಗೂ ಇದು ಬುನಾದಿ. ಇಲ್ಲಿನ ಒಬ್ಬೊಬ್ಬ ಮಹಿಳೆ 10 ಜನ ಸಂಘಟಕರನ್ನು ಪ್ರತಿನಿಧಿಸುತ್ತಾಳೆ. ಇಂದು ಆರಂಭವಾದ ಈ ಸಂಖ್ಯೆ ಇದರ ನೂರರಷ್ಟಾಗಿ ಬೆಳೆಯಬೇಕು. ಆಗಲೂ ನನ್ನನ್ನು ಆಹ್ವಾನಿಸಲು ಮರೆಯಬೇಡಿ ಎಂದು ಕನ್ನಡದ ಪ್ರಸಿದ್ಧ ಚಲನಚಿತ್ರ ನಟಿ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯೆಯಾಗಿದ್ದ […]

ಬೆಂಗಳೂರು ದಕ್ಷಿಣ ಜಿಲ್ಲೆ ಪ್ರತಿಭಾ ಪುರಸ್ಕಾರ

ಬೆಂಗಳೂರು ದಕ್ಷಿಣ ಜಿಲ್ಲೆ ಪ್ರತಿಭಾ ಪುರಸ್ಕಾರ

ದೇವರ ಬಳಿ ಬೇಡುವಾಗ ಅಹಂ ಇರಬಾರದು, ಅತಿ ವಿನಮ್ರರಾಗಿ ನಿವೇದಿಸಿಕೊಂಡಾಗ ಮಾತ್ರ ಬೇಡಿದ್ದು ಸಿಗುತ್ತದೆ ಎಂದು ಕವಿ ಕಾಳಿದಾಸನನ್ನು ಪರೀಕ್ಷಿಸಲು ಕಾಳಿಕಾದೇವಿಯು ಒಡ್ಡಿದ ಪರೀಕ್ಷೆಯ ಘಟನೆಯನ್ನು ಉದಾಹರಿಸಿ ವಿದ್ಯಾರ್ಥಿಗಳಿಗೆ ಪ್ರತಿಭೆಯ ಜೊತೆಗೆ ಸಂಸ್ಕಾರವೂ ಇರಬೇಕು. ಹೀಗೆಂದು ಬೆಂಗಳೂರು ವಿಕ್ಟೋರಿಯಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮಕ್ಕಳ ಹೃದ್ರೋಗ ತಜ್ಞೆ ಡಾ|| ವಿಜಯಲಕ್ಷ್ಮಿ ಐ. ಬಾಳೇಕುಂದ್ರಿಯವರು ಹೇಳಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕವು 5-8-2018 ರಂದು ಹಮ್ಮಿಕೊಂಡಿದ್ದ 33 ನೇ ವರ್ಷದ ಪ್ರತಿಭಾ ಪುರಸ್ಕಾರವನ್ನು […]

ಶಿಕ್ಷಕರಿಂದ ಸಮಾಜದ ಪರಿವರ್ತನೆ ಸಾಧ್ಯ

ಸಂಘಟಿತ ಕಾರ್ಯದಿಂದ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಲು ಸಾಧ್ಯವಿದೆ. ಶಿಕ್ಷಕ ಮನಸ್ಸು ಮಾಡಿದರೇ ಸಮಾಜದ ಪರಿವರ್ತನೆ ಮಾಡಬಹುದು ಎಂದು ಅಖಿಲ ಭಾರತ ರಾಷ್ಟ್ರೀಯ ಶೈಕ್ಷಿಕ ಮಹಾ ಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ ಸಿಂಧನಕೇರಾ ಹೇಳಿದರು. ನಗರದ ಜಗಜ್ಯೋತಿ ಬಸವೇಶ್ವರ ಪದವಿಪೂರ್ವ ಮಹಾ ವಿದ್ಯಾಲಯದಲ್ಲಿ ಇತ್ತೀಚೆಗೆ ಮಾಧ್ಯಮಿಕ ಶಾಲಾ ಶಿಕ್ಷಕ ಸಂಘ ಹಮ್ಮಿಕೊಂಡಿದ್ದ ಶಿಕ್ಷಕರ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು. ಮಾಧ್ಯಮಿಕ ಶಾಲಾ ಶಿಕ್ಷಕರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಹೋರಾಟಗಳನ್ನು ಮಾಡುತ್ತಾ ಬಂದಿದೆ. ವಿವಿಧ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶಿಕ್ಷಕರು […]

ಬೆಂಗಳೂರು ಉತ್ತರ ಜಿಲ್ಲೆ ಪ್ರತಿಭಾ ಪುರಸ್ಕಾರ

ಬೆಂಗಳೂರು ಉತ್ತರ ಜಿಲ್ಲೆ ಪ್ರತಿಭಾ ಪುರಸ್ಕಾರ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಂಗಳೂರು ಉತ್ತರ ಜಿಲ್ಲಾ ಘಟಕವು ದಿನಾಂಕ 12-8-2018 ರಂದು ಮಲ್ಲೇಶ್ವರಂನ, ಹಿಮಾಂಶು ಜ್ಯೋತಿ ಕಲಾಪೀಠಶಾಲೆಯಲ್ಲಿ 33 ನೇ ಪ್ರತಿಭಾ ಪುರಸ್ಕಾರ ಸಮಾರಂಭವು ಜರುಗಿತು. ಸಮಾರಂಭ ಪ್ರಾರಂಭವಾಗುವ ಮೊದಲು ವಿಧಾನ ಪರಿಷತ್ ಸದಸ್ಯರಾದ ಶ್ರೀ ಅ. ದೇವೇಗೌಡರು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಚಿದಾನಂದ ಪಾಟೀಲರು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಪ್ರತಿಭಾ ಪುರಸ್ಕಾರ ಸಮಾರಂಭವು ಶ್ರೀಮತಿ ಸಾವಿತ್ರಿ ಗುಣಿ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಜಿಲ್ಲಾ ಕಾರ್ಯದರ್ಶಿ ಶ್ರೀ ಎಸ್. ಜಿ. […]

ವಿವಿಧೆಡೆಯಲ್ಲಿ ಸದಸ್ಯತಾ ಅಭಿಯಾನ

ವಿವಿಧೆಡೆಯಲ್ಲಿ ಸದಸ್ಯತಾ ಅಭಿಯಾನ

ಹುಬ್ಬಳ್ಳಿಯಲ್ಲಿ ಸದಸ್ಯತಾ ಅಭಿಯಾನ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಸದಸ್ಯತ್ವ ಅಭಿಯಾನವನ್ನು ಹುಬ್ಬಳ್ಳಿಯ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್.ವಿ.ಸಂಕನೂರ ಅವರು ಸ್ವತಃ ತಾವು ಸದಸ್ಯರಾಗುವುದರ ಮೂಲಕ ಚಾಲನೆ ನೀಡಿದರು. ರಾಜ್ಯಾಧ್ಯಕ್ಷರಾದ ಶ್ರೀ ಸಂದೀಪ ಬೂದಿಹಾಳ, ಧಾರವಾಡ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಬಸವರಾಜ ದೇವರಮನಿ ಹಾಗೂ ಕಾರ್ಯಕರ್ತ ಶಿಕ್ಷಕರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಬಾಗಲಕೋಟೆಯಲ್ಲಿ ಸದಸ್ಯತಾ ಅಭಿಯಾನ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬಾಗಲಕೋಟೆ ಸದಸ್ಯತ್ವ ಅಭಿಯಾನವನ್ನು ವಿಧಾನಪರಿಷತ್ […]

ಮೈಸೂರಿನಲ್ಲಿ ಗುರುವಂದನಾ ಮತ್ತು ಪ್ರತಿಭಾ ಪುರಸ್ಕಾರ

ಭಾರತೀಯ ಪರಂಪರೆಯಲ್ಲಿ ಗುರುಗಳಿಗೆ ಪೂಜ್ಯ ಸ್ಥಾನವಿದ್ದು ಆದರೆ ಇತ್ತೀಚಿನ ದಿನಗಳಲ್ಲಿ ಅದು ಕಡಿಮೆಯಾಗುತ್ತಿದೆ ಎಂದು ಶಾಸಕ ಎಸ್.ಎ ರಾಮದಾಸ್ ವಿಷಾದಿಸಿದರು. ಗೋಪಾಲಸ್ವಾಮಿ ವಿದ್ಯಾಸಂಸ್ಥೆಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಮತ್ತು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶೈಕ್ಷಿಕ್ ಸಂಘವು ಆಯೋಜಿಸಿದ್ದ ಗುರುವಂದನಾ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಯಿಯ ನಂತರದ ಸ್ಥಾನದಲ್ಲಿ ಗುರು ಎಂಬುದನ್ನು ವಿದ್ಯಾರ್ಥಿಗಳು ಅರಿತು, ಅವರ ಗೌರವಕ್ಕೆ ಧಕ್ಕೆ ಎಂಬುದನ್ನು ವಿದ್ಯಾರ್ಥಿಗಳು ಅರಿತು, ಅವರ ಗೌರವಕ್ಕೆ ಧಕ್ಕೆ ತಾರದ ರೀತಿಯಲ್ಲಿ […]

Highslide for Wordpress Plugin