
ಕಲ್ಬುರ್ಗಿಯಲ್ಲಿ ಗುರುವಂದನಾ : ಸಂಸ್ಕಾರಯುತ ಶಿಕ್ಷಣದ ವೃತ್ತಿ ರಾಷ್ಟ್ರೀಯ ಭಾವ ಮೂಡಿಸಲು ಶಿಕ್ಷಕರಿಗೆ ಸಲಹೆ
ನಾವು ಪಡೆಯುವ ಶಿಕ್ಷಣ ಕೇವಲ ಮಾಹಿತಿಯನ್ನು ಮಾತ್ರ ಒದಗಿಸುತ್ತಿದ್ದು, ನಮ್ಮಲ್ಲಿ ಶ್ರದ್ದೆ, ಆತ್ಮವಿಶ್ವಾಸ, ಉತ್ಸಾಹ ಹಾಗೂ ಘನತೆ ಹೆಚ್ಚಿಸಲು ಕಾರಣವಾಗಬೇಕು. ಶಿಕ್ಷಕರಾದವರು ವೃತ್ತಿ ನೈಪುಣ್ಯತೆ ಜೊತೆ ಸಂಸ್ಕಾರಯುತ ರಾಷ್ಟ್ರೀಯ ಮನೋಭಾವ ಬೆಳೆಸಿಕೊಳ್ಳಿಸಿಕೊಳ್ಳುವಂತಹ ಶಿಕ್ಷಣ ನೀಡುವಂತಾಗಬೇಕು ಎಂದು ನೂತನ ವಿದ್ಯಾಲಯ ಪದವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ. ಸುರೇಶ ಹೇರೂರ ಸಲಹೆ ನೀಡಿದರು. ನಗರದ ನಳಂದ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿರುವ ಗುರುವಂದನಾ ಹಾಗೂ ಸದಸ್ಯತ್ವ ಅಭಿಯಾನ […]