ರಾಜ್ಯ ಮಟ್ಟದ ಹಿಂದಿ ಶಿಕ್ಷಕರ ಕಾರ್ಯಾಗಾರ

ರಾಜ್ಯ ಮಟ್ಟದ ಹಿಂದಿ ಶಿಕ್ಷಕರ ಕಾರ್ಯಾಗಾರ

ಮೌಲ್ಯಮಾಪನ ಬಹುದೊಡ್ಡ ವಿಚಾರವಾಗಿದ್ದು, ಅದನ್ನು ಬಹು ಎಚ್ಚರಿಕೆಯಿಂದ ನಿಭಾಯಿಸಬೇಕಾಗಿದೆ ಎಂದು ಬೆಂಗಳೂರಿನ ಶೇಷಾದ್ರಿಪುರನಲ್ಲಿರುವ ಸಂಘದ ಕಾರ್ಯಾಲಯ ಯಾದವಸ್ಮೃತಿಯಲ್ಲಿ ದಿನಾಂಕ 10-2-2019 ರಂದು ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಹಿಂದಿ ಶಿಕ್ಷಕರ ಕಾರ್‍ಯಾಗಾರದಲ್ಲಿ ಶೈಕ್ಷಿಕ್ ಮಹಾಸಂಘದ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಶಿವಾನಂದ ಸಿಂಧನಕೇರಾರವರು ಹೇಳಿದರು. ವಂದೇ ಮಾತರಂ ಮತ್ತು ತಾಯಿ ಶಾರದೆಯನ್ನು ನೆನೆಯುತ್ತ ಇಂದಿನ ಶಿಕ್ಷಣ ಮತ್ತು ಶಿಕ್ಷಕರ ಕಾರ್ಯಗಳ ಬಗ್ಗೆ ಮಾತನಾಡುತ್ತಾ, ಇಂದು ಪ್ರೌಢಶಿಕ್ಷಣ ಎಂಬ […]

ಸಂಕಲ್ಪ ದಿನಾಚರಣೆ, ಡೈರಿ ಬಿಡುಗಡೆ ಕಾರ್ಯಕ್ರಮ

ಸಂಕಲ್ಪ ದಿನಾಚರಣೆ, ಡೈರಿ ಬಿಡುಗಡೆ ಕಾರ್ಯಕ್ರಮ

ಬೀದರ: ಮಾಧ್ಯಮಿಕ ಶಿಕ್ಷಕರ ಸಂಘದ ಗೌರವ ಸಲಹೆಗಾರರಾದ ಶ್ರೀ ಎನ್.ಪೆಂಟಾರೆಡ್ಡಿಯವರು ಸಂಕಲ್ಪ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗೆ ಸಂಕಲ್ಪ ಪ್ರತಿಜ್ಞಾ ಪ್ರಮಾಣ ವಚನ ಬೋಧಿಸಿದರು. ಪದವಿಪೂರ್ವ ಶಿಕ್ಷಣ ಇಲಾಖೆ ಬೀದರನ ಉಪನಿರ್ದೇಶಕರಾದ ಶ್ರೀ ಮಲ್ಲಿಕಾರ್ಜುನ ಎಸ್. ರವರು ಪದವಿಪೂರ್ವ ಉಪನ್ಯಾಸಕರ ಸಂಘದ ಡೈರಿ ಬಿಡುಗಡೆ ಮಾಡಿ ಮಾತನಾಡಿ ಕರ್ನಾಟಕದಲ್ಲಿ ಬೀದರ ಜಿಲ್ಲೆಯು ಕಿರೀಟದಲ್ಲಿದೆ. ಆದರೆ ಪಿಯುಸಿ ಫಲಿತಾಂಶದಲ್ಲಿ ಕೆಳಮಟ್ಟದಲ್ಲಿದೆ. ಈ ಹಣೆಪಟ್ಟಿಯನ್ನು ನಿವಾರಣೆ ಮಾಡಲು ಶಿಕ್ಷಕರಿಗೆ ಪರೀಕ್ಷೆ ಫಲಿತಾಂಶ ಸುಧಾರಣೆ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ. ಸರಳ ರೀತಿಯಿಂದ ವಿವಿಧ ವಿಷಯಗಳ […]

ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಕಾರ್ಯಕಾರಿಣಿ ಸಭೆ

ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಕಾರ್ಯಕಾರಿಣಿ ಸಭೆ

ಸಂಘಟನೆ ಎಂಬುದು ಕೇವಲ ಗುಂಪು ಕಟ್ಟುವುದಲ್ಲ. ಸಂಘಟಕ ಎಂದರೆ ಎಲ್ಲರನ್ನು ಜೊತೆಗೆ ಕೊಂಡೊಯ್ಯಬೇಕು ಎಲ್ಲ ಕಾರ್ಯಗಳಲ್ಲೂ ಎಲ್ಲರನ್ನು ತೊಡಗಿಸಿಕೊಂಡು ಎಲ್ಲರನ್ನು ನಮ್ಮೊಂದಿಗೆ ಬೆಳೆಸುತ್ತಾ ಹೋಗಬೇಕು ಎಂದು ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಸಂಘಟನಾ ಮಂತ್ರಿಗಳಾದ ಶ್ರೀಯುತ ಮಹೇಂದ್ರ ಕಪೂರ್‌ಜಿರವರು ದಿನಾಂಕ 2 ಮತ್ತು 3 ಫೆಬ್ರವರಿ 2019 ರಂದು ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ರಾಷ್ಟ್ರೀಯ ಕಾರ್ಯಕಾರಿಣಿಯ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು. ಮುಂಬೈ ಮಹಾನಗರದ ಲೋಯರ್ ಪರೇಲ್‌ನಲ್ಲಿರುವ ಯಶವಂತ ಭವನದಲ್ಲಿ ದೇಶದ […]

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯಬೋಧ ದಿವಸ್ ಆಚರಣೆ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯಬೋಧ ದಿವಸ್ ಆಚರಣೆ

ಶಿಕ್ಷಕನಿಂದ ಗುರುವಿನೆಡೆಗೆ ಪಯಣ – ಶ್ರೀ ರಘುನಂದನ ಹುಬ್ಬಳ್ಳಿ: ಇದು ಆಧುನಿಕ ಯುಗ. ಹಿಂದಿಗಿಂತಲೂ ಇಂದು ಹೆಚ್ಚು ಸವಾಲಾಗಿ ಸ್ವೀಕರಿಸಬೇಕಿದೆ. ಹೀಗಾಗಿ ಶಿಕ್ಷಕನಿಗೂ ಕೌಶಲ್ಯಪೂರ್ಣ ಚಿಂತನೆಗೆ ನೆರವು ಬೇಕಾಗುತ್ತದೆ. ಆ ಕಾರಣಕ್ಕಾಗಿ ಅಧ್ಯಯನ, ಅಧ್ಯಾಪನ, ಭವಿಷ್ಯದ ಚಿಂತನೆ, ದೇಶದ ಸಂಸ್ಕೃತಿಯ ಅರಿವು, ಮಾನವೀಯ ಮೌಲ್ಯಗಳ ಆಚರಣೆ ಹೀಗೆ ಅನೇಕ ರೀತಿಯಲ್ಲಿ ಶಿಕ್ಷಕ ಸಿದ್ಧನಾಗಬೇಕು ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಹಾಗೂ KRMSS ಮಹಾ ವಿದ್ಯಾಲಯಗಳ ಶಿಕ್ಷಕ ಸಂಘಗಳು ವಿಜಯನಗರ ಕಾಲೇಜಿನಲ್ಲಿ ಏರ್ಪಡಿಸಿದ್ದ ಕರ್ತವ್ಯ ಬೋಧ […]

ಸಮರ್ಥ ಭಾರತ ಪರೀಕ್ಷೆ

ಸಮರ್ಥ ಭಾರತ ಪರೀಕ್ಷೆ

ಶೀರ್ಷಿಕೆಯನ್ನು ನೋಡಿದಾಗ ಏನಿದು ಸಮರ್ಥ ಭಾರತ ಎನ್ನುವ ಪ್ರಶ್ನೆ ಸಹಜವಾಗಿ ಏಳುತ್ತದೆ. ಭಾರತ ಮೊದಲಿನಿಂದಲೂ ಸಮರ್ಥವೇ. ಭಾರತದ ಸಾಧನೆ, ಸಮರ್ಥತೆಯನ್ನು ಭಾರತೀಯರೇ ಹೇಳುವುದರಲ್ಲಿ ಅತಿಶಯತೆಯೇನೂ ಇಲ್ಲ ಎನ್ನಿಸಬಹುದು. ಆದರೆ ವಿದೇಶೀಯರು ಭಾರತದ ಹಿರಿಮೆಯನ್ನು ಹೇಳುವ ಮೂಲಕ ಭಾರತ ಸಮರ್ಥ ಎಂದರೆ ಅದು ಎಲ್ಲರೂ ಹೆಮ್ಮೆಪಡುವಂತಹುದೇ. ಅಮೆರಿಕದ ಖ್ಯಾತ ಇತಿಹಾಸಕಾರ, ತತ್ವಜ್ಞಾನಿ ವಿಲ್‌ಡ್ಯುರಾಂಟ್‌ನ ಮಾತುಗಳನ್ನು ಗಮನಿಸೋಣ. ಭಾರತ ವಿಶ್ವದ ನಾಗರಿಕತೆಯ ಮಾತೃಭೂಮಿ ಮತ್ತು ಸಂಸ್ಕೃತ ಯುರೋಪಿಯನ್ ಭಾಷೆಗಳ ತಾಯಿ. ನಮ್ಮ ತತ್ವಜ್ಞಾನದ ಮೂಲ ಸ್ರೋತವೂ ಅವಳೇ. ಅರಬ್ಬರ ಮೂಲಕ […]

ರಾಜಸ್ತಾನದ ಉದಯಪುರದಲ್ಲಿ ವಿಚಾರವರ್ಗ

ರಾಜಸ್ತಾನದ ಉದಯಪುರದಲ್ಲಿ ವಿಚಾರವರ್ಗ

ರಾಷ್ಟ್ರ ಎಂದರೆ ಸಮಾಜ. ಶಿಕ್ಷಕರಲ್ಲಿ ರಾಷ್ಟ್ರದ ಅವಧಾರಣೆಯನ್ನು ಸ್ಪಷ್ಟಪಡಿಸಬೇಕು. All are one ಎಂದು All is one ಎಂದು ಹೇಳಬೇಕು. Each soul is potentially divine. The goal is to manifest this divinity…. By Swami Vivekanand ರವರ ಹೇಳಿಕೆಯನ್ನು  2018 ರ ಡಿಸೆಂಬರ್ 25, 26, 27 -ಈ  ಮೂರು ದಿನಗಳಂದು ರಾಜಸ್ತಾನದ ಉದಯಪುರದಲ್ಲಿ ನಡೆದ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ವಿಚಾರವರ್ಗದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್‍ಯವಾಹರಾದ […]

ದಿಟ್ಟ, ನೇರ ನಿರಂತರ, ನಿಸ್ವಾರ್ಥ, ವಿಶೇಷ ವ್ಯಕ್ತಿತ್ವ

ದಿಟ್ಟ, ನೇರ ನಿರಂತರ, ನಿಸ್ವಾರ್ಥ, ವಿಶೇಷ ವ್ಯಕ್ತಿತ್ವ

ದಿನಾಂಕ 23-12-2018 ರ ಭಾನುವಾರ ಅದೊಂದು ಮಹತ್ವಪೂರ್ಣ ದಿನ. ಯಾದವಸ್ಮೃತಿಯ ಶಿಕ್ಷಕ ಸಂಘದ ಕಾರ್ಯಾಲಯದಲ್ಲಿ ವಾಸಿಸುತ್ತಿರುವ ನಮ್ಮ ಪೂರ್ಣಾವಧಿ ಹಿರಿಯ ಕಾರ್ಯಕರ್ತರಾದ ಶ್ರೀ ಜಿ.ಎಸ್ ಕೃಷ್ಣಮೂರ್ತಿಯವರ ಬಹುಕಾಲದ ಕನಸು ನನಸಾದ ದಿನ. (ಹಲವು ತಿಂಗಳುಗಳಿಂದ ಅವರ ಕನಸನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಲೇ ಇದ್ದರು ನಮ್ಮ ಕೃಷ್ಣಮೂರ್ತಿ) ಶಿಕ್ಷಕ ಸಂಘಕ್ಕೆ ಕೃಷ್ಣಮೂರ್ತಿಯವರ ಪ್ರವೇಶವಾದದ್ದು 1980 ರ ದಶಕದ ಪ್ರಾರಂಭದಲ್ಲಿ. ಅಂದಿನಿಂದ ಅವರು ಸಹಯೋಗಿಗಳಾಗಿ ಶಿಕ್ಷಕ ಸಂಘದಲ್ಲಿ ಸಕ್ರಿಯವಾಗಿ ಕೆಲಸಮಾಡಿ ಸಂಘದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದವರು. ಹಲವರು ನಾವೆಲ್ಲಾ ಒಂದೇ […]

ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ

ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ

ಶಿಕ್ಷಣ ರಾಷ್ಟ್ರದ ಬಲ. ಶಿಕ್ಷಣ ಎಲ್ಲ ಸಮಸ್ಯೆಗಳಿಗೆ ದಿವ್ಯ ಔಷಧವಿದ್ದಂತೆ. ಮೌಲ್ಯಯುತ ಶಿಕ್ಷಣ ನೀಡುವ ಶಿಕ್ಷಕರೇ ನಿಜವಾದ ರಾಷ್ಟ್ರ ರಕ್ಷಕರು ಎಂದು ಧಾರವಾಡ ರಾಮಕೃಷ್ಣ- ವಿವೇಕಾನಂದ ಆಶ್ರಮದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಕೇವಲ ಸರ್ಟಿಫಿಕೇಟ್ ನೀಡುವುದು ಶಿಕ್ಷಣವಲ್ಲ. ಯಾರೋ ಬರೆದಿಟ್ಟ ಇತಿಹಾಸ ಓದುವ ಮೂಲಕ ನಾವು ಆತ್ಮಸ್ವಾತಂತ್ರ್ಯ ಕಳೆದುಕೊಂಡಿದ್ದೇವೆ. ಶಿಕ್ಷಕರು ಪೇಮೆಂಟ್, ಪ್ರಮೋಶನ್ ಹಾಗೂ ಪೆನ್ಶನ್ ಎಂಬ ಮೂರು ‘ಪಿ’ಗಳ ಬಗ್ಗೆ ಮಾತ್ರ ಚಿಂತಿಸದೇ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಬೇಕು. ಶಿಕ್ಷಕರ ಒಳಗೆ ದಿವ್ಯತೆ […]

ವಿಷಯ ಪುನಃಶ್ಚೇತನ ಕಾರ್ಯಾಗಾರ

ವಿಷಯ ಪುನಃಶ್ಚೇತನ ಕಾರ್ಯಾಗಾರ

ದಿನಾಂಕ 30-11-2018 ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಂಗಳೂರು ಉತ್ತರ ಜಿಲ್ಲಾ ಘಟಕದ ವತಿಯಿಂದ ಒಂದು ದಿನದ ಗಣಿತ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಾಗಾರವನ್ನು ಎಸ್.ವಿ.ಎನ್. ಆಂಗ್ಲಶಾಲೆ, ನಾಗವಾರ ಇಲ್ಲಿ ಆಯೋಜಿಸಲಾಗಿತ್ತು. ಉದ್ಘಾಟನೆಯನ್ನು ಸಂಘದ ಪೋಷಕರಾದ ಕೃ. ನರಹರಿಯವರು ಉದ್ಘಾಟಿಸಿ ಶಿಕ್ಷಕರು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಇಂತಹ ಪುನಶ್ಚೇತನ ಕಾರ್ಯಾಗಾರಗಳು ಸಹಕಾರಿಯಾಗಲಿ ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಎಸ್.ವಿ.ಎನ್. ಶಾಲೆಯ ಸಂಸ್ಥಾಪಕ ಕಾರ್ಯದರ್ಶಿಯವರಾದ ಶ್ರೀ ಸುಬ್ಬರಾಜುರವರು ವಹಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ […]

ರಾಜ್ಯಮಟ್ಟದ ಸಂಸ್ಕೃತ ಶಿಕ್ಷಕರ ಸಮಾವೇಶ

ರಾಜ್ಯಮಟ್ಟದ ಸಂಸ್ಕೃತ ಶಿಕ್ಷಕರ ಸಮಾವೇಶ

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ ಸಂಘ (ರಿ) ಹಾಗೂ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ರಿ) ಇವರ ಸಹಯೋಗದಲ್ಲಿ ದಿನಾಂಕ 29-11-2018 ರಂದು ಬೆಂಗಳೂರಿನಲ್ಲಿರುವ ಯಾದವಸ್ಮೃತಿ ಸಭಾಭವನದಲ್ಲಿ ಒಂದು ದಿನದ ಪ್ರೌಢಶಾಲಾ ಸಂಸ್ಕೃತ ಶಿಕ್ಷಕರ ರಾಜ್ಯಮಟ್ಟದ ಸಮಾವೇಶ ನಡೆಯಿತು. ಖ್ಯಾತ ಶಿಕ್ಷಣತಜ್ಞರು ಹಾಗೂ ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀಯುತ ಪ್ರೊ. ಕೃ. ನರಹರಿಯವರು ದೀಪ ಬೆಳಗುವುದರ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು. ಶ್ರೀಯುತರು ತಮ್ಮ ಉದ್ಘಾಟನಾ ಭಾಷಣದಲ್ಲಿ ಹಿಂದಿನಿಂದಲೂ ಸಂಸ್ಕೃತ ಭಾಷಾ ಶಿಕ್ಷಣಕ್ಕೆ ತಮ್ಮ […]

Highslide for Wordpress Plugin