ದೇಶ ಏಳ್ಗೆಯಾಗಬೇಕಾದರೆ ನರಹರಿಯಂಥವರು ಬೇಕು – ಡಾ||. ಕೆ.ಎಸ್. ನಾರಾಯಣಾಚಾರ್ಯ
ಉತ್ತಮ ಶಿಕ್ಷಕರನ್ನು ಸನ್ಮಾನಿಸುವುದು ಸಮಾಜದ ಅತ್ಯಂತ ಉತ್ತಮ ಕಾರ್ಯ. ನರಹರಿಯವರು ಅಂತಹ ಉತ್ತಮ ಶಿಕ್ಷಕರು ಹಾಗೂ ಕ್ರಿಯಾಶೀಲರು. ಪ್ರಾಮಾಣಿಕತೆ, ರಾಷ್ಟ್ರಪ್ರೇಮ, ತ್ಯಾಗ ಮನೋಭಾವಗಳನ್ನು ಮೈಗೂಡಿಸಿಕೊಂಡ ವಿಶಿಷ್ಟ ವ್ಯಕ್ತಿತ್ವ ನರಹರಿಯವರದು. ಶಿಕ್ಷಕರಾಗಿ, ಶಾಸಕರಾಗಿ ಶಿಕ್ಷಣ ಕ್ಷೇತ್ರಕ್ಕೆ , ಶಿಕ್ಷಕ ಸಮುದಾಯಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ. ದೇಶ ಏಳಿಗೆಯಾಗಬೇಕಾದರೆ ನಮಗೆ ನರಹರಿಯಂಥವರು ಬೇಕು. ಇಂತಹ ವಿಶಿಷ್ಟ ವ್ಯಕ್ತಿತ್ವದ ನರಹರಿಯವರನ್ನು ಸನ್ಮಾನಿಸುತ್ತಿರುವುದು ಅತ್ಯಂತ ಉಚಿತವಾಗಿದೆ ಎಂದು ಪ್ರಖ್ಯಾತ ವಿದ್ವಾಂಸರೂ, ಲೇಖಕರೂ ಆದ ಡಾ|| ಕೆ. ಎಸ್. ನಾರಾಯಣಾಚಾರ್ಯರು ಪ್ರೊ. ಕೃ. ನರಹರಿಯವರ […]