ದೇಶ ಏಳ್ಗೆಯಾಗಬೇಕಾದರೆ ನರಹರಿಯಂಥವರು ಬೇಕು - ಡಾ||. ಕೆ.ಎಸ್. ನಾರಾಯಣಾಚಾರ್ಯ

ದೇಶ ಏಳ್ಗೆಯಾಗಬೇಕಾದರೆ ನರಹರಿಯಂಥವರು ಬೇಕು – ಡಾ||. ಕೆ.ಎಸ್. ನಾರಾಯಣಾಚಾರ್ಯ

ಉತ್ತಮ ಶಿಕ್ಷಕರನ್ನು ಸನ್ಮಾನಿಸುವುದು ಸಮಾಜದ ಅತ್ಯಂತ ಉತ್ತಮ ಕಾರ್ಯ. ನರಹರಿಯವರು ಅಂತಹ ಉತ್ತಮ ಶಿಕ್ಷಕರು ಹಾಗೂ ಕ್ರಿಯಾಶೀಲರು. ಪ್ರಾಮಾಣಿಕತೆ, ರಾಷ್ಟ್ರಪ್ರೇಮ, ತ್ಯಾಗ ಮನೋಭಾವಗಳನ್ನು ಮೈಗೂಡಿಸಿಕೊಂಡ ವಿಶಿಷ್ಟ ವ್ಯಕ್ತಿತ್ವ ನರಹರಿಯವರದು. ಶಿಕ್ಷಕರಾಗಿ, ಶಾಸಕರಾಗಿ ಶಿಕ್ಷಣ ಕ್ಷೇತ್ರಕ್ಕೆ , ಶಿಕ್ಷಕ ಸಮುದಾಯಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ. ದೇಶ ಏಳಿಗೆಯಾಗಬೇಕಾದರೆ ನಮಗೆ ನರಹರಿಯಂಥವರು ಬೇಕು. ಇಂತಹ ವಿಶಿಷ್ಟ ವ್ಯಕ್ತಿತ್ವದ ನರಹರಿಯವರನ್ನು ಸನ್ಮಾನಿಸುತ್ತಿರುವುದು ಅತ್ಯಂತ ಉಚಿತವಾಗಿದೆ ಎಂದು ಪ್ರಖ್ಯಾತ ವಿದ್ವಾಂಸರೂ, ಲೇಖಕರೂ ಆದ ಡಾ|| ಕೆ. ಎಸ್. ನಾರಾಯಣಾಚಾರ್ಯರು ಪ್ರೊ. ಕೃ. ನರಹರಿಯವರ […]

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ರಾಜ್ಯ ಕಾರ್ಯಕಾರಿಣಿ ಸಭೆ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ರಾಜ್ಯ ಕಾರ್ಯಕಾರಿಣಿ ಸಭೆ

ದಿನಾಂಕ 12-11-2017  ರಂದು ಹುಬ್ಬಳ್ಳಿ ಬನಶಂಕರಿ ಬಡಾವಣೆಯ ಸೇವಾ ಸದನದಲ್ಲಿ ನಡೆದ ‘ಕಾರ್ಯಕಾರಿಣಿಯ ವರದಿ ಶಿಕ್ಷಕರ ವೇತನ ತಾರತಮ್ಯವನ್ನು ನಿವಾರಿಸಲು ‘ಒಂದು ದೇಶ, ಒಂದು ಶಿಕ್ಷಣ, ಒಂದು ವೇತನ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಒತ್ತಾಯಿಸಿದೆ. ದೇಶದ 30 ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಶಿಕ್ಷಕರಿಗೆ ನೀಡುತ್ತಿರುವ ವೇತನ ಶ್ರೇಣಿಯನ್ನು ಜಾರಿ ಮಾಡಲಾಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೇಂದ್ರ ಮಾದರಿಯ ವೇತನ ಜಾರಿಯಾಗಿಲ್ಲ, ಹಾಗಾಗಿ ಇಡೀ ದೇಶಕ್ಕೆ ಅನ್ವಯ ವಾಗುವಂತೆ ಒಂದೇ ದೇಶ, – ಒಂದೇ […]

ರಾಷ್ಟ್ರೀಯ ಕಾರ್ಯಕಾರಿಣಿಯ ವರದಿ

ಮಹಿಳೆಯರ ಸ್ಥಿತಿಗತಿಯ ಆಧಾರದ ಮೇಲೆ ಒಂದು ಸಮಾಜದ ಸ್ಥಿತಿಗತಿಯ ಪರಿಚಯವಾಗುತ್ತದೆ ಎಂದು ABRSM ನ ಸಂರಕ್ಷಕರಾದ ಶ್ರೀ ಅನಿರುದ್ದ ದೇಶಪಾಂಡೆಜೀಯವರು ಇದೇ ಅಕ್ಟೋಬರ್ 27 ರಂದು ಅಮರಾವತಿಯಲ್ಲಿ (ಮಹಾರಾಷ್ಟ್ರ) ನಡೆದ ರಾಷ್ಟ್ರೀಯ ಮಹಿಳಾ ಸಂವರ್ಗದ ಸಭೆಯಲ್ಲಿ ಮಹಿಳೆಯರನ್ನು ಉದ್ದೇಶಿಸಿ ಮಾತನಾಡುತ್ತಾ ತಿಳಿಸಿದರು. ಮಹಿಳಾ ಸಂವರ್ಗದ ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗುವುದರೊಂದಿಗೆ ಹಾಗೂ ಸರಸ್ವತಿ ವಂದನೆಯೊಂದಿಗೆ ಪ್ರಾರಂಭ ಮಾಡಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ಂಃಖSಒನ ಅಧ್ಯಕ್ಷರಾದ ಡಾ|| ವಿಮಲ್ ಪ್ರಸಾದ್ ಅಗರ್‌ವಾಲ್ ರವರು, ಸಂರಕ್ಷಕರಾದ ಶ್ರೀ ಅನಿರುದ್ಧ ದೇಶಪಾಂಡೆಯವರು ಉಪಸ್ಥಿತರಿದ್ದರು. ಮೊದಲನೇ ಅವಧಿಯಲ್ಲಿ 7 ರಾಜ್ಯಗಳಿಂದ […]

ಶಿಕ್ಷಕರಿಂದ ವಿದ್ಯಾರ್ಥಿಗಳ ಆತ್ಮ ಸಾಕ್ಷಾತ್ಕಾರ - ಶಿಕ್ಷಾಭೂಷಣ ಡಾ|| ಚಿ.ಮೂ. ಅಭಿಮತ

ಶಿಕ್ಷಕರಿಂದ ವಿದ್ಯಾರ್ಥಿಗಳ ಆತ್ಮ ಸಾಕ್ಷಾತ್ಕಾರ – ಶಿಕ್ಷಾಭೂಷಣ ಡಾ|| ಚಿ.ಮೂ. ಅಭಿಮತ

ಶಿಕ್ಷಾಭೂಷಣ ತೃತೀಯ ಅಖಿಲ ಭಾರತೀಯ ಶಿಕ್ಷಕ ಸಮ್ಮಾನ: ವರದಿ ವ್ಯಕ್ತಿತ್ವ ವಿಕಾಸದ ಒಂದು ಪ್ರಭಾವಶಾಲೀ ಮಾಧ್ಯಮ ಶಿಕ್ಷಣ ಕ್ಷೇತ್ರ. ಅಷ್ಟೇ ಅಲ್ಲ, ಇದು ವ್ಯಕ್ತಿಯ ಭವಿಷ್ಯ ನಿರ್ಮಾಣದೊಂದಿಗೆ ರಾಷ್ಟ್ರದ ಭವಿಷ್ಯವನ್ನೂ ನಿರ್ಮಿಸುವ ಕ್ಷೇತ್ರ. ಅದರಿಂದ ಇದನ್ನು ಮಾಹಿತಿ ಕೇಂದ್ರ ಭೂಮಿಕೆಯಿಂದ ಹೊರಗೆ ತರಬೇಕಾಗಿದೆ. ಸಮಾಜಕ್ಕೆ ನಾವು ಕೊಡಬೇಕಾದುದರ ಬಗ್ಗೆ ವಿದ್ಯಾರ್ಥಿಗಳು ಚಿಂತನೆ ಮಾಡುವಂತೆ ಶಿಕ್ಷಣವನ್ನು ನೀಡಬೇಕು. ದಿನಾಂಕ 10-9-2017 ರಂದು ನಗರದ ಶಿಕ್ಷಕರ ಸದನದಲ್ಲಿ ನಡೆದ ತೃತೀಯ ಅಖಿಲ ಭಾರತೀಯ ಶಿಕ್ಷಕರ ಸಮ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ […]

ಕಾರ್ಯಕರ್ತರ ಪ್ರವಾಸ

ಕಾರ್ಯಕರ್ತರ ಪ್ರವಾಸ

ಪ್ರವಾಸ ಜ್ಞಾನಾರ್ಜನೆಗೆ ಪೂರಕ. ದೈನಂದಿನ ಏಕತಾನತೆಯನ್ನು ಕಳೆದು ಹೊಸ ಉತ್ಸಾಹ, ಹುರುಪಿನೊಂದಿಗೆ ಮತ್ತೆ ನಮ್ಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರವಾಸ ಸಹಕಾರಿಯಾಗುತ್ತದೆ. ಸಂಘ ಸಂಸ್ಥೆಗಳ ಕಾರ್ಯಕರ್ತರು ಪರಸ್ಪರ ಅರಿತು ಹೊಂದಾಣಿಕೆಯಿಂದ ಸಂಘದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರವಾಸ ಸಹಕಾರಿಯಾಗುತ್ತದೆ. ಈ ಉದ್ದೇಶದಿಂದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಘಟಕವು ಐವತ್ತು ಜನ ಶಿಕ್ಷಕರು ಹಾಗೂ ಅವರ ಕುಟುಂಬದವರಿಗೆ ದಿನಾಂಕ 19-8-2017 ಮತ್ತು 20-8-2017 ರಂದು ಎರಡು ದಿನದ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರವಾಸವು ದಿನಾಂಕ 19-8-2017 ರಾತ್ರಿ […]

ಹೃದಯದ ಭಾಷೆ ಕಲಿಸಿ - ಹೃದಯವಂತರನ್ನಾಗಿಸಿ : ಭಾವೀ ಶಿಕ್ಷಕರಿಗೆ ಸ್ವಾಮಿ ವೀರೇಶಾನಂದರ ಕಿವಿ ಮಾತು

ಹೃದಯದ ಭಾಷೆ ಕಲಿಸಿ – ಹೃದಯವಂತರನ್ನಾಗಿಸಿ : ಭಾವೀ ಶಿಕ್ಷಕರಿಗೆ ಸ್ವಾಮಿ ವೀರೇಶಾನಂದರ ಕಿವಿ ಮಾತು

‘ವಿದ್ಯಾ ವಿಹೀನ: ಪಶುಃ, ವಿದ್ಯಾ ರಾಜಸ್ವ, ಪೂಜ್ಯತೇ ನತು ಧನಂ. ವಿದ್ಯೆಯೇ ಶ್ರೀಮಂತಿಕೆ, ಹಣ ಎಂದೆಂದಿಗೂ ಅಲ್ಲ. ಆದ್ದರಿಂದ ಪ್ರಶಿಕ್ಷಣಾರ್ಥಿಗಳು , ಶಿಕ್ಷಕರು ಹಣದ ಹಿಂದೆ ಹೋಗದೆ ಆದರ್ಶಮುಖಿಗಳಾಗಬೇಕು. ಇಲ್ಲವಾದರೆ ಸಮಾಜಕ್ಕೆ ಏನನ್ನೂ ಕೊಡಲು ಸಾಧ್ಯವಿಲ್ಲ. ಸಮಾಜದಲ್ಲಿ ಆದರ್ಶಗಳನ್ನು ಹುಡುಕಲು ಹೊರಟರೆ ನಿರಾಶೆಯಾಗುತ್ತದೆ. ಮೇಷ್ಟ್ರು ಬಡವ ನಾದರೆ ಶ್ರೀಮಂತ ಶಿಷ್ಯನನ್ನು ರೂಪಿಸಬಲ್ಲ. ಶ್ರೀಮಂತನಾದರೆ ಸಾಧ್ಯವಿಲ್ಲ. ಆದ್ದರಿಂದ ಶಿಕ್ಷಕರು ಹಣದ ಹಿಂದೆ ಹೋಗದೆ ಯಾವತ್ತೂ ಆದರ್ಶಮುಖಿಗಳಾಗೋಣ ಎಂದು ತುಮಕೂರಿನ ಶ್ರೀರಾಮಕೃಷ್ಣ-ವಿವೇಕಾನಂದ ಯೋಗಾಶ್ರಮದ ಸ್ವಾಮಿ ವೀರೇಶಾನಂದರು ಶಿಕ್ಷಕರಿಗೆ ಕರೆ ನೀಡಿದರು. […]

ಪರಿವರ್ತನೆ ಮಾಡುವ ಪದವಿ ಅಗತ್ಯ

ಪರಿವರ್ತನೆ ಮಾಡುವ ಪದವಿ ಅಗತ್ಯ

ಗುರುವಂದನೆ, ಶಿಕ್ಷಕರ ಗುಣಮಟ್ಟ, ಸವಾಲುಗಳು-ಪರಿಕಲ್ಪನೆ ಕಾರ್ಯಾಗಾರ ಭಾರತವು ಮತ್ತೆ ವಿಶ್ವಗುರುವಾಗಿ ಮೆರೆಯಬೇಕಾದರೆ ನಮ್ಮ ಯಾತ್ರೆಯು ಶಿಕ್ಷಕನಿಂದ ಗುರುವಿನತ್ತ ಸಾಗಬೇಕು. ಆ ನಿಟ್ಟಿನಲ್ಲಿ ಮನೆಯಲ್ಲಿ ತಾಯಿ, ವರ್ಗದಲ್ಲಿ ಶಿಕ್ಷಕ, ಸಮಾಜದಲ್ಲಿ ಸನ್ಯಾಸಿ ಸುಧಾರಿಸಬೇಕಾಗಿದೆ ಅಂದಾಗಲೇ ದೇಶ ಮತ್ತು ಸಮಾಜ ಸುಧಾರಿಸಲು ಸಾಧ್ಯವೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಪ್ರಚಾರಕರಾದ ಶ್ರೀ ಶಂಕರಾನಂದ ಹೇಳಿದರು. ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶೈಕ್ಷಿಕ ಸಂಘ, ಕರ್ನಾಟಕ ಅಧ್ಯಾಪಕ ಪರಿಷತ್ ಹಾಗೂ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಆಶ್ರಯದಲ್ಲಿ ವಿದ್ಯಾನಗರ ಬಿವಿಬಿ ಇಂಜಿನಿಯರಿಂಗ್ ಕಾಲೇಜ್ […]

ಆವಿಷ್ಕಾರ ಮಾಡಿ, ದೇಶಕ್ಕೆ ಕೊಡುಗೆ ನೀಡಿ

ಆವಿಷ್ಕಾರ ಮಾಡಿ, ದೇಶಕ್ಕೆ ಕೊಡುಗೆ ನೀಡಿ

ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಧ್ಯಮಿಕ ಶಿಕ್ಷಕ ಸಂಘದ 32 ನೆ ಪ್ರತಿಭಾ ಪುರಸ್ಕಾರ ನಮ್ಮ ದೇಶದಲ್ಲಿ ಬೇರೆ ದೇಶಗಳಿಗಿಂತ ಭಿನ್ನವಾದ ಕಾರ್ಯಕ್ಷಮತೆಯಿದೆ. ನಾವು ಚಿಂತಿಸುವುದು, ಕೈಗೊಳ್ಳುವ ಕಾರ್ಯ ಕೇವಲ ನಮ್ಮ ದೇಶದ ಏಳಿಗೆಗಲ್ಲ, ಇಡೀ ಪ್ರಪಂಚಕ್ಕೆ ಬೇಕಾದುದನ್ನು ಮಾಡುತ್ತೇವೆ, ದಕ್ಷಿಣ ಏಷ್ಯಾ ಸೆಟಲೈಟ್‌ಗಳನ್ನು ನಿರ್ಮಿಸಿದ್ದನ್ನು ಇಡೀ ಪ್ರಪಂಚ ಶ್ಲಾಘಿಸುತ್ತಿದೆ, ವೈಯಕ್ತಿಕ ಯೋಚನೆಗಿಂತ ಪರಿಸರದಲ್ಲಿ ಎಲ್ಲ ಜೀವಿಗಳಿಗೆ, ಮುಂದಿನ ಪೀಳಿಗೆಗೆ ಒಂದು ಜವಾಬ್ದಾರಿಯನ್ನು ತರುತ್ತದೆ, ನಮ್ಮ ಪರಂಪರೆಯಲ್ಲಿಯೂ ಅದನ್ನೇ ಕಾಣುತ್ತೇವೆ. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು ದಕ್ಷಿಣ […]

ಮೌಲ್ಯಗಳನ್ನು ಬೆಳೆಸಿಕೊಂಡು ಹಿರಿಯರನ್ನು ಗೌರವಿಸಿ  :  ವಿದ್ಯಾರ್ಥಿಗಳಿಗೆ ಡಾ|| ಟಿ.ವಿ.ರಾಜು ಕರೆ

ಮೌಲ್ಯಗಳನ್ನು ಬೆಳೆಸಿಕೊಂಡು ಹಿರಿಯರನ್ನು ಗೌರವಿಸಿ : ವಿದ್ಯಾರ್ಥಿಗಳಿಗೆ ಡಾ|| ಟಿ.ವಿ.ರಾಜು ಕರೆ

ಬೆಂಗಳೂರು : ತಾಯಿಯೇ ಮೊದಲ ಗುರು ತಾಯಿಯನ್ನು ಮೊದಲು ಪೂಜಿಸಿ ಕೃತಜ್ಞರಾಗಿ. ಆಗ ನಿಮ್ಮ ಭವಿಷ್ಯ ಉಜ್ವಲವಾಗುವುದು. ಮೌಲ್ಯಗಳನ್ನು ಬೆಳೆಸಿಕೊಳ್ಳಿ, ಹಿರಿಯರನ್ನು ಗೌರವಿಸಿ, ದೇಶದ ಅಭಿವೃದ್ಧಿಗಾಗಿ ಶ್ರಮಿಸಿ ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಂಗಳೂರು ಉತ್ತರ ಜಿಲ್ಲಾ ಘಟಕದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ|| ಟಿ.ವಿ. ರಾಜು ಶಾಲಾ ಪ್ರಥಮಿಗರಿಗೆ ಕಿವಿಮಾತು ಹೇಳಿದರು. ದಿನಾಂಕ 13-7-2017 ರಂದು ಹಿಮಾಂಶು ಜ್ಯೋತಿ ಕಲಾಪೀಠದಲ್ಲಿ 2017 ರಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿನ ಶಾಲಾ ಪ್ರಥಮಿಗರು ಹಾಗೂ ಶೇಕಡಾ ೮೫ಕ್ಕಿಂತ […]

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಧರಣಿ

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಧರಣಿ

ದಿನಾಂಕ 10-6-2017 ರಂದು ಸಭೆ ಸೇರಿದ್ದ ಮಾಧ್ಯಮಿಕ ಶಿಕ್ಷಕ ಸಂಘದ ಕೇಂದ್ರ ಪದಾಧಿಕಾರಿಗಳು ಪಠ್ಯ ಪುಸ್ತಕಗಳ ದೋಷಗಳು, ವಿತರಣೆಯಲ್ಲಿನ ಲೋಪ ಹಾಗೂ ಇನ್ನಿತರ ಬೇಡಿಕೆಗಳನ್ನು ಪೂರೈಸಲು ಮುಖ್ಯ ಮಂತ್ರಿಗಳನ್ನು ಆಗ್ರಹಿಸುವಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಧರಣಿಯನ್ನು ನಡೆಸಿ ಶಿಕ್ಷಕರು ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಕಳಿಸಬೇಕೆಂದು ಕರೆ ನೀಡಿದ್ದರು. ಈ ಕರೆಗೆ ಅನುಗುಣವಾಗಿ ರಾಜ್ಯದ 20 ಜಿಲ್ಲೆಗಳಲ್ಲಿ ನಮ್ಮ ಸಂಘದ ಪದಾಧಿಕಾರಿಗಳು ಅನೇಕ ಶಿಕ್ಷಕರ ಜೊತೆಯಲ್ಲಿ 2 ಗಂಟೆಗಳ ಕಾಲ ಸತತ ಧರಣಿ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ […]

Highslide for Wordpress Plugin