ಪರೀಕ್ಷೆಯನ್ನು ಸಂಭ್ರಮಿಸಿ
ಹಿತಮಿತವಾದ ಆಹಾರ ಸೇವನೆ, ಸರಿಯಾಗಿ ನಿದ್ದೆ ಮಾಡುವುದು, ಭಯ ಮತ್ತು ಆತಂಕದಿಂದ ದೂರವಿದ್ದು ಉಲ್ಲಸಿತ ಮನಸ್ಸಿನಿಂದ ಪರೀಕ್ಷೆಯನ್ನು ಎದುರಿಸಿದರೆ ವಿದ್ಯಾರ್ಥಿಗಳಿಗೆ ಯಶಸ್ಸು ಖಂಡಿತ. ಇದು ಮಾನಸಿಕ ತಜ್ಞರಾದ ಡಾ|| ಸತ್ಯನಾರಾಯಣ ರಾವ್ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ನೀಡಿದ ಕಿವಿಮಾತು. ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಗೊಂದಲಗಳಿಗೆ ಒಳಗಾಗಬಾರದು. ವಿಷಯಗಳಿಗೆ ಸಂಬಂಧಿಸಿದ ಅನುಮಾನಗಳನ್ನು ಶಿಕ್ಷಕರ ಬಳಿ ಚರ್ಚಿಸಿ ಪರಿಹರಿಸಿಕೊಳ್ಳಬೇಕು. ಪರೀಕ್ಷಾ ಕಾಲದಲ್ಲಿ ಮಾತ್ರ ಹೆಚ್ಚು ಸಮಯ ಓದುವುದರಿಂದ ಮಾನಸಿಕ ಒತ್ತಡಕ್ಕೆ ವಿದ್ಯಾರ್ಥಿಗಳು ಒಳಗಾಗುತ್ತಾರೆ. ಪ್ರಾರಂಭದಿಂದಲೇ ತಯಾರಾಗುತ್ತಾ ಬಂದರೆ ಪರೀಕ್ಷೆಯನ್ನು ಬಹಳ ಸುಲಭವಾಗಿ […]