ಪ್ರತಿಭೆಯನ್ನು ದೇಶಕ್ಕೆ ಅರ್ಪಿಸಿ : ವಿದ್ಯಾರ್ಥಿಗಳಿಗೆ ಮಹೇಂದ್ರ ಮುನ್ನಾತ್ ಕರೆ
ನನ್ನ ಭಾರತ, ನಿಮ್ಮ ಭಾರತ ಸುಭಾಷ್ ಚಂದ್ರರ ಭಾರತ, ವಾಜಪೇಯಿ ಭಾರತ, ಭಗತ್ ಸಿಂಗ್ರ ಭಾರತ, ಅಬ್ದುಲ್ ಕಲಾಂರ ಭಾರತ. ಇಂತಹ ಶ್ರೇಷ್ಠ ಭಾರತದ ಮಣ್ಣನ್ನು ಪೂಜಿಸಿ, ಧರ್ಮವನ್ನು ಪ್ರೀತಿಸಿ, ನಮ್ಮ ಮನೆ, ನಮ್ಮ ಬೀದಿಯನ್ನು ಸ್ವಚ್ಛವಾಗಿಟ್ಟರೆ ಇಡೀ ಭಾರತವೇ ಸ್ವಚ್ಛ ಭಾರತವಾಗುತ್ತದೆ, ಎಲ್ಲವನ್ನೂ ಸರ್ಕಾರದಿಂದಲೇ ಅಪೇಕ್ಷಿಸಬೇಡಿ ಎಂದು ಮಾರುತಿ ಮೆಡಿಕಲ್ಸ್ನ ಶ್ರೀ ಮಹೇಂದ್ರ ಮುನ್ನಾತ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮುಂದುವರೆದು ಅವರು ತಾಯಿ ಹಾಲು ಇರೋತನಕ, ಹಸುವಿನ ಹಾಲು ಕೊನೆತನಕ ಎಂದು ಹೇಳುವುದರ ಮೂಲಕ ಗೋವಿನ […]