ಶಿಕ್ಷಕರಿಗೆ ಸಂಕಲ್ಪ ಏಕೆ -ಹೇಗೆ?
ಜೀವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿದವರ ಬಗ್ಗೆ ಒಂದು ನೋಟ ಹರಿಸೋಣ. ಐ.ಸಿ.ಎಸ್. ಮುಗಿಸಿದ ನಂತರ ಸ್ವಂತ ಏಳಿಗೆಯನ್ನು ಲೆಕ್ಕಿಸದೆ ಆಜಾದ್ ಹಿಂದ್ ಸೇನೆ ಕಟ್ಟಿ, ಪೂರ್ವ ಭಾರತ ಆಕ್ರಮಿಸಿ ಇಂಗ್ಲೀಷರನ್ನು ಹಣ್ಣುಗಾಯಿ, ನೀರುಗಾಯಿ ಮಾಡಿ ಸಾವಿರಾರು ಜನರಿಗೆ ಸ್ವಾತಂತ್ರ್ಯದ ಹುಚ್ಚು ಹತ್ತಿಸಿ ನಮ್ಮ ದೇಶವನ್ನು ಸ್ವತಂತ್ರಗೊಳಿಸಿದ ಮಹಾನ್ ಪುರುಷ ಡಾ|| ಸುಭಾಷ್ ಚಂದ್ರ ಬೋಸ್. ಗಾಂಧಿಜೀಯವರೂ ಇದಕ್ಕೆ ಹೊರತೇನಲ್ಲ. ಖ್ಯಾತ ವಿಜ್ಞಾನಿ- ಭಾರತದ ತಂತ್ರಜ್ಞಾನದ ಜನಕ- ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ತಲೆಯಲ್ಲಿರಿಸಿಕೊಂಡು ದೃಢ ಸಂಕಲ್ಪದಿಂದ […]