ಶಿಕ್ಷಕರಿಗೆ ಸಂಕಲ್ಪ ಏಕೆ -ಹೇಗೆ?

ಜೀವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿದವರ ಬಗ್ಗೆ ಒಂದು ನೋಟ ಹರಿಸೋಣ. ಐ.ಸಿ.ಎಸ್. ಮುಗಿಸಿದ ನಂತರ ಸ್ವಂತ ಏಳಿಗೆಯನ್ನು ಲೆಕ್ಕಿಸದೆ ಆಜಾದ್ ಹಿಂದ್ ಸೇನೆ ಕಟ್ಟಿ, ಪೂರ್ವ ಭಾರತ ಆಕ್ರಮಿಸಿ ಇಂಗ್ಲೀಷರನ್ನು ಹಣ್ಣುಗಾಯಿ, ನೀರುಗಾಯಿ ಮಾಡಿ ಸಾವಿರಾರು ಜನರಿಗೆ ಸ್ವಾತಂತ್ರ್ಯದ ಹುಚ್ಚು ಹತ್ತಿಸಿ ನಮ್ಮ ದೇಶವನ್ನು ಸ್ವತಂತ್ರಗೊಳಿಸಿದ ಮಹಾನ್ ಪುರುಷ ಡಾ|| ಸುಭಾಷ್ ಚಂದ್ರ ಬೋಸ್. ಗಾಂಧಿಜೀಯವರೂ ಇದಕ್ಕೆ ಹೊರತೇನಲ್ಲ. ಖ್ಯಾತ ವಿಜ್ಞಾನಿ- ಭಾರತದ ತಂತ್ರಜ್ಞಾನದ ಜನಕ- ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ತಲೆಯಲ್ಲಿರಿಸಿಕೊಂಡು ದೃಢ ಸಂಕಲ್ಪದಿಂದ […]

ಪಾಠದಲ್ಲಿ ಪ್ರೀತಿ, ಅಂತಃಕರಣ ಇರಲಿ

ಪಾಠದಲ್ಲಿ ಪ್ರೀತಿ, ಅಂತಃಕರಣ ಇರಲಿ

ಶಿಕ್ಷಕರು ತಮ್ಮ ಹಳೆ ಅನುಭವಗಳ ಜತೆಗೆ ಹೊಸ ಅನುಭವಗಳನ್ನು ಸೇರಿಸಿಕೊಂಡು ಪಾಠ ಮಾಡಿದರೆ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ ಎಂದು ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಹೇಳಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ 8-11-2016, ಮಂಗಳವಾರ ನಗರದ ತಾಲ್ಲೂಕು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಯಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರ ಪಾತ್ರ ಕುರಿತ ಒಂದು ದಿನ ಕಾರ್ಯಾಗಾರ ಹಾಗೂ ವಿಷನ್-2016 ಕುರಿತು ಮಾತನಾಡಿದರು. ಪಾಠದ ಜತೆಗೆ ಪ್ರೀತಿ, ಅಂತಃಕರಣ […]

ಬಡ್ತಿ ಮತ್ತು ಭರ್ತಿಗಾಗಿ ಕಪ್ಪು ಪಟ್ಟಿ ಹೋರಾಟ

ಬಡ್ತಿ ಮತ್ತು ಭರ್ತಿಗಾಗಿ ಕಪ್ಪು ಪಟ್ಟಿ ಹೋರಾಟ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ(ರಿ) ದಿನಾಂಕ 23-10-2016 ರಂದು ನಡೆದ ಪ್ರಾಂತ ಕೋರ್ ಕಮಿಟಿ ಸಭೆಯಲ್ಲಿ ಪ್ರೌಢಶಾಲಾ ಮತ್ತು ಪದವಿಪೂರ್ವ ಕಾಲೇಜು ಉಪನ್ಯಾಸಕರ ಪದೋನ್ನತಿಗೆ ಆಗ್ರಹಿಸಿದೆ. ಶಿಕ್ಷಕರ ಬೇಡಿಕೆಯಾದ ಪದೋನ್ನತಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದಿನಾಂಕ 15-8-2016 ರಿಂದ 30-08-2016 ರವರೆಗೆ ರಾಜ್ಯದ ಪ್ರೌಢಶಾಲಾ ಶಿಕ್ಷಕರು ಮತ್ತು ಉಪನ್ಯಾಸಕರಿಂದ ಪ್ರಥಮ ಹಂತದಲ್ಲಿ • ಪ್ರೌಢಶಾಲೆಗಳ ಸಹಶಿಕ್ಷಕರನ್ನು ಮುಖ್ಯಶಿಕ್ಷಕರಾಗಿ ಹಾಗೂ ಪದವಿ ಪೂರ್ವ ಉಪನ್ಯಾಸಕರಾಗಿ ಮತ್ತು ದೈಹಿಕ ಶಿಕ್ಷಕರ, ವೃತ್ತಿಶಿಕ್ಷಕರ ಪದೋನ್ನತಿಗೆ ಆಗ್ರಹ. • ಪ್ರೌಢಶಾಲೆಗಳ ಮುಖ್ಯ ಶಿಕ್ಷಕರನ್ನು ಶಿಕ್ಷಣಾಧಿಕಾರಿಗಳಾಗಿ ಪದೋನ್ನತಿಗೆ […]

ಕಾನ್ಪುರದಲ್ಲಿ ಅಖಿಲ ಭಾರತ ಮಹಿಳಾ ಸಮನ್ವಯ ಸಭೆ

ಕಾನ್ಪುರದಲ್ಲಿ ಅಖಿಲ ಭಾರತ ಮಹಿಳಾ ಸಮನ್ವಯ ಸಭೆ

ದೇಶಸೇವೆಯ ಕೆಲಸದಲ್ಲಿ ತೊಡಗುವ ನಾನಾ ಸಂಘಟನೆಗಳು ಪರಸ್ಪರ ಸಂಪರ್ಕ ಮತ್ತು ಸಮನ್ವಯದೊಂದಿಗೆ ಕಾರ್ಯ ನಡೆಸುವುದು ಅಗತ್ಯ. ಪ್ರತಿಯೊಬ್ಬ ಮಹಿಳೆ ನಾಗರಿಕಳಾಗಿ ಸಾಮಾಜಿಕ ಪ್ರಜ್ಞೆಯೊಂದಿಗೆ ರಾಷ್ಟ್ರಚಿಂತನೆ ಮಾಡು ವಂತಾಗಬೇಕು. ಎಂದು ಇದೇ ಸೆಪ್ಟೆಂಬರ್ 17 ಮತ್ತು 18 ರಂದು ಯು.ಪಿ. ಯ ಕಾನ್ಪುರದಲ್ಲಿ ನಡೆದ ಅಖಿಲಭಾರತ ಮಹಿಳಾ ಸಮನ್ವಯದ ಸಭೆಯ ನೇತೃತ್ವ ವಹಿಸಿದ್ದ ರಾಷ್ಟ್ರ ಸೇವಿಕಾ ಸಮಿತಿಯ ಪ್ರಮುಖರಾದ ಗೀತಾ ತಾಯಿಯವರು ತಿಳಿಸಿದರು. ರಾಷ್ಟ್ರಸೇವಿಕಾ ಸಮಿತಿಯ ಸಂಚಾಲಕರಾದ ವಂದನೀಯ ಶಾಂತಕ್ಕ, ಸಂಘ ಪ್ರಮುಖರಾದ ಪ್ರಮೀಳಾತಾಯಿ, ಸಂಘ ಪ್ರಮುಖ ಪ್ರಚಾರಕರಾದ ಡಾ|| ಮನಮೋಹನ್‌ಜೀ […]

2016-19 ರ ವರೆಗಿನ ಧಾರವಾಡ ಜಿಲ್ಲಾ ಕಾರ್ಯಕಾರಿಣಿ

ಗೌರವಾಧ್ಯಕ್ಷರು – ಶ್ರೀ ಪುಂಡಲೀಕ ಕವಳಿಕಟ್ಟಿ ; ಅಧ್ಯಕ್ಷರು – ಶ್ರೀ ಶ್ರೀಧರ ಪಾಟೀಲಕುಲಕರ್ಣಿ ಪ್ರಧಾನ ಕಾರ್ಯದರ್ಶಿ – ಶ್ರೀ ಬಸವರಾಜ ದೇವರಮನಿ ; ಸಂಘಟನಾ ಕಾರ್ಯದರ್ಶಿ – ಶ್ರೀ ಶಿವಾನಂದ ನಾಗೂರ ಜಿಲ್ಲಾ ಮಹಿಳಾ ಪ್ರಮುಖ – ಶ್ರೀಮತಿ ಅಶ್ವಿನಿ ಸಾವಕಾರ ; ಖಜಾಂಚಿ – ಶ್ರೀ ರವಿಚಂದ್ರ ಕೊಣ್ಣೂರ ಉಪಾಧ್ಯಕ್ಷರು – ಶ್ರೀ ಸಂಜೀವ ಭೂಶೆಟ್ಟಿ, ಶ್ರೀ ಅಶೋಕ ಜೋಶಿ, ಶ್ರೀ ಎಮ್.ಎಸ್.ತಿರ್ಲಾಪೂರ, ಶ್ರೀ ಎಮ್.ಕೆ.ಪಾಟೀಲ ಕಾರ್ಯದರ್ಶಿಗಳು – ಶ್ರೀ ಲಿಂಗರಾಜ ಅರ್ಕಸಾಲಿ, ಶ್ರೀ […]

ಹುಬ್ಬಳ್ಳಿಯಲ್ಲಿ ಶಿಕ್ಷಕರ - ಉಪನ್ಯಾಸಕರ ಸಮಸ್ಯೆಗಳ ಕುರಿತು ಸಭೆ

ಹುಬ್ಬಳ್ಳಿಯಲ್ಲಿ ಶಿಕ್ಷಕರ – ಉಪನ್ಯಾಸಕರ ಸಮಸ್ಯೆಗಳ ಕುರಿತು ಸಭೆ

ದಿನಾಂಕ 13, ಸೆಪ್ಟಂಬರ್ 2016, ಮಂಗಳವಾರ ಬೆಳಗ್ಗೆ 11 ಕ್ಕೆ ವಿಜಯನಗರ ಪಿ.ಯು. ಕಾಲೇಜ್, ವಿದ್ಯಾನಗರ, ಹುಬ್ಬಳ್ಳಿಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಶಿಕ್ಷಕರ / ಉಪನ್ಯಾಸಕರ ಸಮಸ್ಯೆಗಳ ಕುರಿತು ಸಭೆ ನಡೆಯಿತು. ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್.ವ್ಹಿ. ಸಂಕನೂರವರು ಈ ಸಭೆಯನ್ನು ಉದ್ದೇಶಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು 1965 ರಿಂದ ಇಲ್ಲಿಯವರೆಗೂ ಶಿಕ್ಷಕರ ಹಿತಕ್ಕಾಗಿ ಕಾರ್ಯ ಮಾಡುತ್ತಾ ಇದೆ ಈ ಭಾಗದಲ್ಲಿ ಇನ್ನು ಗಟ್ಟಿಯಾಗಿ ನೆಲೆವೂರಿ ಬೆಳೆಯಬೇಕಾಗಿದೆ. […]

ಯಾದಗಿರಿ ಜಿಲ್ಲಾ ಘಟಕದ ಸಭೆ

ಯಾದಗಿರಿ ಜಿಲ್ಲಾ ಘಟಕದ ಸಭೆ

ದಿನಾಂಕ 11-9-2016 ರಂದು ಶಹಾಪುರದಲ್ಲಿ ನಡೆದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ರಿ.) ಯಾದಗಿರಿ ಜಿಲ್ಲಾ ಘಟಕದ ಸಭೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಆರ್ ಕೊಟ್ರಪ್ಪ ಜಿ., ಉಪಪ್ರಚಾರ್ಯರಾದ ಶ್ರೀ ಲಿಂಗಣ್ಣ ಸಿಂಪಿ, ಚಿಂತಮ್ಮ ಗೌಡತಿ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಮಲ್ಲಿಕಾರ್ಜುನ್ ಅವಂಟಿ, ಶ್ರೀ ಸೋಮಶೇಖರಯ್ಯ ಹಿರೇಮಠ ಜಿಲ್ಲಾ ಅಧ್ಯಕ್ಷರಾದ ಶ್ರೀ ಅನಿಲ್ ಕುಮಾರ್ ಬಿರಾದಾರ್, ಜಿಲ್ಲಾ ಗೌರವ ಅಧ್ಯಕ್ಷರಾದ ಶ್ರೀ ಸುಧಾಕರ್ ಗುಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಬಿ.ಜಿ. ಪಾಟೀಲ್ ಹಾಗೂ ಜಿಲ್ಲಾ ಘಟಕದ […]

ಬೆಂಗಳೂರಿನಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ ರಾಷ್ಟ್ರದ್ರೋಹಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ

ಬೆಂಗಳೂರು ವಸಂತನಗರದಲ್ಲಿರುವ ದಿ ಯೂನೈಟೆಡ್ ಥಿಯೋಲಾಜಿಕಲ್ ಕಾಲೇಜಿನಲ್ಲಿ ಅಮ್ನೆಷ್ಟಿ ಇಂಟೆರನ್ಯಾಷನಲ್ ಸಂಸ್ಥೆಯವರು ಆಯೋಜಿಸಿದ್ದ ಮುರಿದ ಮನೆಗಳು ಎಂಬ ಹೆಸರಿನ ಕಾರ್ಯಕ್ರಮದಲ್ಲಿ ದೇಶ ವಿಭಜಿಸುವ ಘೋಷಣೆಗಳನ್ನು ಕೂಗಿದ್ದು ಮತ್ತು ಉಗ್ರವಾದಿಗಳನ್ನು ಹುತಾತ್ಮನನ್ನಾಗಿಸುವ ಪ್ರಯತ್ನವನ್ನು KRMSS ಬಲವಾಗಿ ಖಂಡಿಸುತ್ತದೆ. ಅತ್ಯಂತ ಶಿಸ್ತು ಬದ್ಧ ಭಾರತೀಯ ಸೈನ್ಯವನ್ನು ಖಳನಾಯಕನನ್ನಾಗಿಸುವ ದೇಶದ್ರೋಹಿಗಳ ಕುತಂತ್ರವನ್ನು ಖಂಡಿಸಿದ್ದಕ್ಕಾಗಿ ಅ.ಭಾ.ವಿ.ಪ. ಕಾರ್ಯಕರ್ತರನ್ನು ಬಂಧಿಸಿರುವುದು ಖಂಡನೀಯ. ಈ ರೀತಿಯ ಕೃತ್ಯಗಳು ಮತ್ತು ಕಾರ್ಯಕ್ರಮಗಳು ನಮ್ಮ ಹೆಮ್ಮೆಯ ಸೈನ್ಯದ ಸ್ಪೂರ್ತಿ ಕುಂದಿಸುವುದಲ್ಲದೇ ಈ ಮಹಾನ್ ರಾಷ್ಟ್ರವನ್ನು ಅಸ್ಥಿರಗೊಳಿಸುವ ಸಂಚು ಎಂದು […]

ಬೆಂಗಳೂರು ದಕ್ಷಿಣ ಜಿಲ್ಲೆಯ 31 ನೇ ಪ್ರತಿಭಾ ಪುರಸ್ಕಾರ

ಬೆಂಗಳೂರು ದಕ್ಷಿಣ ಜಿಲ್ಲೆಯ 31 ನೇ ಪ್ರತಿಭಾ ಪುರಸ್ಕಾರ

ಒಂದು ಸಾಮಾನ್ಯವಾದ ಕಲ್ಲನ್ನು ಅತ್ಯುತ್ತಮವಾದ ಶಿಲ್ಪಿ ಸುಂದರವಾದ ಮೂರ್ತಿಯನ್ನಾಗಿ ಕೆತ್ತಬಲ್ಲ. ಹಾಗೆಯೇ ಸಾಧಾರಣವಾದ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಧಾರೆಯೆರೆದು ಅಸಾಧಾರಣ ವ್ಯಕ್ತಿಯನ್ನಾಗಿಸಿ, ಅತ್ಯುನ್ನತವಾದ ಸ್ಥಾನಕ್ಕೆ ಏರಿಸಬಲ್ಲ ಶಕ್ತಿ ನಮ್ಮ ಶಿಕ್ಷಕರಿಗಿರುತ್ತದೆ. ಅಂಥ ಶಿಕ್ಷಕರಿಗಾಗಿಯೇ ಶಿಕ್ಷಕ ಸಂಘದ 31ನೆಯ ಪ್ರತಿಭಾಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ನನಗೆ ತುಂಬ ಸಂತೋಷವಾಗಿದೆ ಎಂದು ಪ್ರೊ|| ಎನ್.ವಿ ರಘುರಾಮ್ ಅವರು ವಿದ್ಯಾರ್ಥಿಗಳನ್ನು ಮತ್ತು ಅವರ ಪೋಷಕರನ್ನು ಕುರಿತು ಮಾತನಾಡುತ್ತಾ ತಿಳಿಸಿದರು. ಬೆಂಗಳೂರಿನ ಜಯನಗರದ ಆರ್.ವಿ. ಟೀಚರ್‍ಸ್ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು […]

ಪ್ರಾಂತ ನೂತನ ಕಾರ್ಯಕಾರಿಣಿ

ಪ್ರಾಂತ ನೂತನ ಕಾರ್ಯಕಾರಿಣಿ

ದಿನಾಂಕ 31-7-2016 ರಂದು ಬೆಂಗಳೂರಿನಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ 2016-2018-19 ಅವಧಿಗೆ ಪ್ರಾಂತೀಯ ಕಾರ್ಯಕಾರಿಣಿಗೆ ಆಯ್ಕೆಯಾದ ಪದಾಧಿಕಾರಿಗಳು. ಅಧ್ಯಕ್ಷರು: ಶ್ರೀಯುತ ಶಿವಾನಂದ ಸಿಂಧನಕೇರಾ, ಮೈಸೂರು ಪ್ರಧಾನ ಕಾರ್ಯದರ್ಶಿ : ಶ್ರೀಯುತ ಚಿದಾನಂದ ಪಾಟೀಲ, ಕನಕಪುರ ಮಹಾ ಪೋಷಕರು: ಪ್ರೊ|| ಕೃ. ನರಹರಿ, ಮಾಜಿ ಎಂ.ಎಲ್.ಸಿ ಪೋಷಕರು : ಶ್ರೀ ಹೆಚ್. ನಾಗಭೂಷಣ್ ರಾವ್ ಮಾರ್ಗದರ್ಶಕರು : ಪ್ರೊ|| ಕೆ. ಬಾಲಕೃಷ್ಣಭಟ್, ಮಾಜಿ ಎಂ.ಎಲ್.ಸಿ  ; ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಎಂ.ಎಲ್.ಸಿ  ; ಶ್ರೀ ಅರುಣ್ ಶಹಾಪೂರ ಎಂ.ಎಲ್.ಸಿ ರಾಜ್ಯ ಸಹ ಪ್ರಧಾನ ಕಾರ್ಯದರ್ಶಿ […]

Highslide for Wordpress Plugin