ನಾರೀ ಶಕ್ತಿ ಅಮರ್ ರಹೇ

ನಾರೀ ಶಕ್ತಿ ಅಮರ್ ರಹೇ

ಸಮಾಜದ ಬಗ್ಗೆ ಕಳಕಳಿ ಇರುವ ಸಹ ಮನಸ್ಕ ಮಹಿಳೆಯರ ಏಕತ್ರೀಕರಣಕ್ಕಾಗಿ ವಿವಿಧ ವೃತ್ತಿಜೀವನ ನಡೆಸುತ್ತಿರುವ ಮಹಿಳೆಯರಿಗೆ ಸಮಾಜಮುಖೀ ದೃಷ್ಟಿಯನ್ನು ನೀಡಲು ಅವರವರ ಆಸಕ್ತಿಗನುಗುಣವಾದ ಸಮಾಜ ಸೇವೆಯ ಅವಕಾಶ ಏರ್ಪಡಿಲು, ಇದೇ ತಿಂಗಳ ನವೆಂಬರ್ 26 ರಂದು ನಾರಿಶಕ್ತಿ ಸಮ್ಮೇಳನವನ್ನು ಬಿ.ಎಂ.ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಮರ್ಥ ಭಾರತ ವತಿಯಿಂದ ಬೆಂಗಳೂರು ದಕ್ಷಿಣ ವಿಭಾಗ ಮಟ್ಟದ ಮಹಿಳಾ ಸಮ್ಮೇಳನವನ್ನು ಏರ್ಪಡಿಸಲಾಗಿತ್ತು. ಡಾ|| ವಿಜಯಲಕ್ಷ್ಮಿ ದೇಶಮಾನೆ ಅಧ್ಯಕ್ಷತೆ, ಡಾ|| ಗೋಮತಿ ದೇವಿಯವರ ಉಪಾಧ್ಯಕ್ಷತೆಯಲ್ಲಿ ಭಾರತೀಯ ಚಿಂತನೆಯಲ್ಲಿ ಮಹಿಳೆ ವಿಚಾರ ಸಂಕಿರಣ ನಡೆಯಿತು. […]

ಗುರುವಿನ ಗುರುತ್ವವು ಗುರುವಿನ ಜ್ಞಾನ ಮತ್ತು ಗುಣದಲ್ಲಿ ಅಡಗಿದೆ : ದತ್ತಾತ್ರೇಯ ಹೊಸಬಾಳೆ

ಗುರುವಿನ ಗುರುತ್ವವು ಗುರುವಿನ ಜ್ಞಾನ ಮತ್ತು ಗುಣದಲ್ಲಿ ಅಡಗಿದೆ : ದತ್ತಾತ್ರೇಯ ಹೊಸಬಾಳೆ

ಡಾ. ಮೀನಾಕ್ಷಿ ಜೈನ್, ಪ್ರೊಫೆಸರ್ ಕುಲದೀಪ್ ಚಂದ್ ಅಗ್ನಿಹೋತ್ರಿ ಮತ್ತು ಡಾ. ಸಂಜೀವನಿ ಕೇಳ್ಕರ್ ಅವರಿಗೆ ಶಿಕ್ಷಾ ಭೂಷಣ ಸಮ್ಮಾನ್ ಗೌರವ ಗುರುವಿನ ಗುರುತ್ವವು ಅವನ ಜ್ಞಾನ ಮತ್ತು ಸ್ವಭಾವದಲ್ಲಿದೆ. ಗುರುವಾಗುವುದು ನಿರಂತರ ಪ್ರಕ್ರಿಯೆಯಾಗಿದ್ದು ಅದು ಆಜೀವ ಕಲಿಕೆಯನ್ನು ಒಳಗೊಂಡಿರುತ್ತದೆ. ನಾಗಪುರದಲ್ಲಿ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘ (ಎಬಿಆರ್‌ಎಸ್‌ಎಂ) ಆಯೋಜಿಸಿದ್ದ ಶಿಕ್ಷಾ ಭೂಷಣ ಸಮ್ಮಾನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ದತ್ತಾತ್ರೇಯ ಹೊಸಬಾಳೆ ಅವರು ಮಾತನಾಡಿದರು. ಹೊಸಬಾಳೆ ಮಾತನಾಡಿ, ಭರತ ಗುರು ಪರಂಪರೆಯು […]

ರಾಜ್ಯ ಕಾರ್ಯಕಾರಿ ಸಮಿತಿ - 2023-2026

ರಾಜ್ಯ ಕಾರ್ಯಕಾರಿ ಸಮಿತಿ – 2023-2026

36 ನೇ ಪ್ರತಿಭಾ ಪುರಸ್ಕಾರ- ಬೆಂಗಳೂರು ದಕ್ಷಿಣ ಜಿಲ್ಲೆ

36 ನೇ ಪ್ರತಿಭಾ ಪುರಸ್ಕಾರ- ಬೆಂಗಳೂರು ದಕ್ಷಿಣ ಜಿಲ್ಲೆ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ದಕ್ಷಿಣ ಜಿಲ್ಲೆಯ ವತಿಯಿಂದ 2022-23 ನೇ ಶೈಕ್ಷಣಿಕ ವರ್ಷದಲ್ಲಿ SSಐಅ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಶಾಲಾ ಪ್ರಥಮಿಗರನ್ನು, ದಿವ್ಯಾಂಗರನ್ನು, 90% ಹೆಚ್ಚು ಅಂಕ ಗಳಿಸಿದ ಶಿಕ್ಷಕರ ಮಕ್ಕಳನ್ನು ಗೌರವಿಸುವ ೩೬ ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭವು ದಿನಾಂಕ: 6-8-2023ರಂದು ಭಾನುವಾರ ಲೋಟಸ್ ಕನ್ವೆನ್ಷನ್ ಸೆಂಟರ್ ರಾಮಮೂರ್ತಿ ನಗರದಲ್ಲಿ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನೆರವೇರಿತು. ಶ್ರೀಮತಿ ಮಾಯಾ ಪುಭುರವರ ಸರಸ್ವತಿಯ ಪ್ರಾರ್ಥನೆಯೊಂದಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು 10.30 ಕ್ಕೆ […]

36 ನೇ ಪ್ರತಿಭಾ ಪುರಸ್ಕಾರ- ಬೆಂಗಳೂರು ಉತ್ತರ ಜಿಲ್ಲೆ

36 ನೇ ಪ್ರತಿಭಾ ಪುರಸ್ಕಾರ- ಬೆಂಗಳೂರು ಉತ್ತರ ಜಿಲ್ಲೆ

ದಿನಾಂಕ : 29-7-2023 ರ ಶನಿವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯ ವತಿಯಿಂದ ಆಯೋಜಿಸಿದ್ದ 2022-23 ನೇ ಶೈಕ್ಷಣಿಕ ವರ್ಷದ ಬೆಂಗಳೂರು ಉತ್ತರ ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಹಾಗೂ ಬಿ.ಬಿ.ಎಂ.ಪಿ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲಾ ಪ್ರಥಮಿಗ ವಿದ್ಯಾರ್ಥಿಗಳು ಹಾಗೂ ಶೇಕಡಾ 85 ಕ್ಕಿಂತಲೂ ಹೆಚ್ಚು ಅಂಕಗಳಿಸಿರುವ ಶಿಕ್ಷಕರ ಮಕ್ಕಳಿಗೆ 36 ನೇ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಲ್ಲೇಶ್ವರಂನ ಹಿಮಾಂಶು ಜ್ಯೋತಿ ಕಲಾಪೀಠದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಾ ಪುರಸ್ಕೃತ […]

ಗುರುವಂದನಾ ಕಾರ್ಯಕ್ರಮ-ಬೆಂಗಳೂರು ಉತ್ತರ ಜಿಲ್ಲೆ

ಗುರುವಂದನಾ ಕಾರ್ಯಕ್ರಮ-ಬೆಂಗಳೂರು ಉತ್ತರ ಜಿಲ್ಲೆ

ದಿನಾಂಕ: 15-7-2023 ರ ಶನಿವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯ ವತಿಯಿಂದ ಗುರುವಂದನಾ ಕಾರ್ಯಕ್ರಮವನ್ನು ಬೆಂಗಳೂರು ಉತ್ತರ ವಲಯ-3ರ, ಡೇವಿಸ್ ರಸ್ತೆಯಲ್ಲಿರುವ ಸೆಂಟ್ ಅಲ್ಫೋನ್ಸಸ್ ಪ್ರೌಢಶಾಲೆಯಲ್ಲಿ ಬೆಂಗಳೂರು ಉತ್ತರ ಜಿಲ್ಲೆಯ ಅನೇಕ ಶಿಕ್ಷಕರು, ಮಾಧ್ಯಮಿಕ ಶಿಕ್ಷಕ ಸಂಘದ ಪದಾಧಿಕಾರಿಗಳು ಹಾಗೂ ಗುರುವಂದನಾ ಪುರಸ್ಕೃತ ಶಿಕ್ಷಕರೊಂದಿಗೆ ವಿಶೇಷವಾದ ರೀತಿಯಲ್ಲಿ ಸುಂದರವಾಗಿ ಆಚರಿಸಲಾಯಿತು. ಮಲ್ಲಿಕಾರ್ಜುನ ಸ್ವಾಮಿ ಪ್ರೌಢಶಾಲೆಯ ವೃತ್ತಿ ಶಿಕ್ಷಕರಾದ ಶ್ರೀಮತಿ ವಿಶಾಲಾಕ್ಷಿ ಆರ್. ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕರ್ನಾಟಕ ರಾಜ್ಯ ಮಾಧ್ಯಮಿಕ […]

ರಾಜ್ಯ ಕಾರ್ಯಕಾರಿಣಿ ಮತ್ತು ಸಾಮಾನ್ಯಸಭೆಯ ವರದಿ

ರಾಜ್ಯ ಕಾರ್ಯಕಾರಿಣಿ ಮತ್ತು ಸಾಮಾನ್ಯಸಭೆಯ ವರದಿ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕೇಂದ್ರ ಕಾರ್ಯಾಲಯ ಯಾದವಸ್ಮೃತಿ, ಶೇಷಾದ್ರಿಪುರಂ, ಬೆಂಗಳೂರು ಇಲ್ಲಿ ರಾಜ್ಯ ಕಾರ್ಯಕಾರಣಿ ಮತ್ತು ಸಾಮಾನ್ಯ ಸಭೆಯು ದಿನಾಂಕ 9-7-2023 ರಂದು ಭಾನುವಾರ ನಡೆಯಿತು. ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಂದೀಪ ಬೂದಿಹಾಳ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಸರಸ್ವತಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಪ್ರಾರಂಭವಾಯಿತು. ಸರಸ್ವತಿಯ ಪ್ರಾರ್ಥನೆಯನ್ನು ರಾಜ್ಯದ ಉಪಾಧ್ಯಕ್ಷರಾದ ಶ್ರೀಮತಿ ರೋಹಿಣಿ ನಾಯಕ್ ಇವರು ಮಾಡಿದರು. ಸಭೆಯಲ್ಲಿರುವ ಎಲ್ಲರನ್ನು ರಾಜ್ಯ ಸಹ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಗಂಗಾಧರಾಚಾರಿ ಅವರು ಸ್ವಾಗತಿಸಿ, […]

ವಿವಿಧೆಡೆಗಳಲ್ಲಿ ಗುರುವಂದನಾ ಕಾರ್ಯಕ್ರಮ

ವಿವಿಧೆಡೆಗಳಲ್ಲಿ ಗುರುವಂದನಾ ಕಾರ್ಯಕ್ರಮ

ಬೆಂಗಳೂರು ದಕ್ಷಿಣ ಜಿಲ್ಲೆ ದಿನಾಂಕ 4-7-2023 ಮಂಗಳವಾರದಂದು ಕ.ರಾ.ಮಾ.ಶಿ. ಸಂಘದ ಕಾರ್ಯಾಲಯ ಯಾದವಸ್ಮೃತಿಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಂಗಳೂರು ದಕ್ಷಿಣ ವಿಭಾಗದ ವತಿಯಿಂದ ಗುರುವಂದನಾ ಕಾರ್ಯಕ್ರಮವು ಶ್ರದ್ಧಾ, ಭಕ್ತಿ, ಸಂಭ್ರಮದಿಂದ ಆಚರಿಸಲ್ಪಟ್ಟಿತು. ಕು|| ವೇದಶ್ರೀ ರವರ ಆಚಾರ್ಯ ಶಂಕರ ವಿರಚಿತ ಗುರ್ವಷ್ಟಕದ ಸುಶ್ರಾವ್ಯವಾದ ಗಾಯನದೊಂದಿಗೆ ಕಾರ್ಯಕ್ರಮ ಶುಭಾರಂಭಗೊಂಡಿತು. ಮುಖ್ಯ ವಕ್ತಾರರಾಗಿ ವಿದ್ವಾನ್ ವೇಂಕಟರಾಮ ಶಾಸ್ತ್ರಿಗಳು ಉಪಸ್ಥಿತರಿದ್ದರು. ಅವರು ಉಪನ್ಯಾಸ ನೀಡುತ್ತ ಭಾರತೀಯ ಪರಂಪರೆಯಲ್ಲಿ ಆಷಾಢ ಶುಕ್ಲ ಪೂರ್ಣಿಮೆಯು ಗುರುಪೂರ್ಣಿಮೆ ಅಥವಾ ವ್ಯಾಸಪೂರ್ಣಿಮೆ ಎಂದು ಪ್ರಸಿದ್ಧವಾಗಿದೆ. […]

ಪ್ರೌಢಶಾಲಾ ಶಿಕ್ಷಕರ ವೇತನ ವಿಳಂಬ - ಮನವಿ

ಪ್ರೌಢಶಾಲಾ ಶಿಕ್ಷಕರ ವೇತನ ವಿಳಂಬ – ಮನವಿ

ಅನುದಾನಿತ ಪ್ರೌಢಶಾಲಾ ಶಿಕ್ಷಕರ ವೇತನ ವಿಳಂಬಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಇಲಾಖೆಯ ಮಾನ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರೀತೇಶ ಕುಮಾರ್ ಸಿಂಗ್ ಅವರನ್ನು ಮತ್ತು ಆಯುಕ್ತರಾದ ಶ್ರೀ ಆರ್. ವಿಶಾಲ್ ಅವರನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿದಾನಂದ ಪಾಟೀಲ, ರಾಜ್ಯ ಖಜಾಂಚಿಗಳಾದ ಶ್ರೀ ಜೆ.ಎಂ.ಜೋಷಿ, ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಕೂಡಗಿ. ಜಿಲ್ಲಾ ಕಾರ್ಯದರ್ಶಿಗಳಾದ ಹರಿದಾಸ ಮತ್ತು ಉಪಾಧ್ಯಕ್ಷರಾದ ಶ್ರೀಮತಿ ಮಂಜು ರೂಪ ಅವರನ್ನು ಒಳಗೊಂಡ ಸಮಿತಿಯು ಭೇಟಿ […]

ಯುಗಾದಿ ಹೊಸ ವರ್ಷದ ದಿನದರ್ಶಿಕೆ ಬಿಡುಗಡೆ

ಯುಗಾದಿ ಹೊಸ ವರ್ಷದ ದಿನದರ್ಶಿಕೆ ಬಿಡುಗಡೆ

ಯುಗಾದಿ ಹೊಸ ವರ್ಷದ ದಿನದರ್ಶಿಕೆ ಬಿಡುಗಡೆ, ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಪನ್ಮೂಲ ಶಿಕ್ಷಕರಿಗೆ ಗೌರವ ಸಮರ್ಪಣೆ ಮತ್ತು ABRSM ರಾಷ್ಟ್ರೀಯ ಅಧಿವೇಶನದಲ್ಲಿ ಭಾಗವಹಿಸಿದ ಕಾರ್ಯಕರ್ತರಿಗೆ ಅಭಿನಂದನಾ ಪತ್ರ ವಿತರಣೆ ಕಾರ್ಯಕ್ರಮ ದಿನಾಂಕ 25-3-2023 ರ ಶನಿವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲೆಗಳ ಸಹಯೋಗದಲ್ಲಿ ಶ್ರೀ ಶೋಭಕೃತ್ ನಾಮ ಸಂವತ್ಸರದ ಯುಗಾದಿ ಹೊಸವರ್ಷದ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮ, 2022-23 ೩ನೇ ಶೈಕ್ಷಣಿಕ ಸಾಲಿನ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಕರ್ನಾಟಕ […]

Highslide for Wordpress Plugin