37 ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭ

37 ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ದಕ್ಷಿಣ ಜಿಲ್ಲೆಯ ವತಿಯಿಂದ 2023-24 ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಶಾಲಾ ಪ್ರಥಮಿಗರನ್ನು, ಶಿಕ್ಷಕರ ಮಕ್ಕಳನ್ನು ಹಾಗೂ ದಿವ್ಯಾಂಗರನ್ನು ಪುರಸ್ಕರಿಸುವ 37 ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದಿನಾಂಕ 1-8-2024  ರಂದು ಗ್ಲೋಬಲ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ಪದವಿ ಪೂರ್ವ ವಿದ್ಯಾಲಯ ಮಲ್ಲೇಶ್ ಪಾಳ್ಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ವೈಭವೋಪೇತ ಸಭಾಭವನದಲ್ಲಿ ಕಾರ್ಯಕ್ರಮ ಸುಂದರವಾಗಿ ಮೂಡಿ ಬಂತು. ಸಂಘದ ಹಿರಿಯ ಕಾರ್ಯಕರ್ತರಾದ […]

ಬೀದರ್‌ನಲ್ಲಿ ಕ.ರಾ.ಮಾ.ಶಿ. ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಬೀದರ್‌ನಲ್ಲಿ ಕ.ರಾ.ಮಾ.ಶಿ. ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಬೀದರ್: ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಪರಮೇಶ್ವರ್ ಬಿರಾದಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ನಗರದ ಸರಸ್ವತಿ ಶಾಲೆಯ ಗಿರಿಜಾ ಸಭಾ ಮಂಟಪದಲ್ಲಿ ಗುರುವಾರ ನಡೆದ ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳಲ್ಲಿ ವಿಜಯಕುಮಾರ ಪಾಟೀಲ ಯರನಳ್ಳಿ (ಗೌರವಾಧ್ಯಕ್ಷ), ರಮೇಶ ಪಾಟೀಲ (ಪ್ರಧಾನ ಕಾರ್ಯದರ್ಶಿ) ಹಾಗೂ ಸಂತೋಷ್ ಮಂಗಳೂರೆ (ಖಜಾಂಚಿ) ಸೇರಿದ್ದಾರೆ. ಸಂಘದ ಪ್ರಾಂತ ಕಾರ್ಯದರ್ಶಿ ಮಹೇಶ ಬಸರಕೋಡ ಅವರು ಪ್ರಾಸ್ತಾವಿಕವಾಗಿ ಮಾತನಾಡುವುದರೊಂದಿಗೆ ಜಿಲ್ಲಾ ಘಟಕದ […]

ಕ.ರಾ.ಮಾ.ಶಿ.ಸಂಘ(ರಿ.) ಬೆಂಗಳೂರು, ಕಾರ್ಯಕಾರಣಿ & ಸಾಮಾನ್ಯ ಸಭೆ

ಕ.ರಾ.ಮಾ.ಶಿ.ಸಂಘ(ರಿ.) ಬೆಂಗಳೂರು, ಕಾರ್ಯಕಾರಣಿ & ಸಾಮಾನ್ಯ ಸಭೆ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆ ದಿನಾಂಕ: 28-7-2024 ರ ಭಾನುವಾರ ಬೆಂಗಳೂರಿನ ಕೇಂದ್ರ ಕಾರ್ಯಾಲಯ ಯಾದವಸ್ಮೃತಿಯಲ್ಲಿ ಜರುಗಿತು. ಮೊದಲನೆ ಅವಧಿ: ಉದ್ಘಾಟನಾ ಅವಧಿ: ಈ ಅವಧಿಯಲ್ಲಿ ವೇದಿಕೆಯ ಮೇಲಿದ್ದ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಣಿಕ ಮಹಾಸಂಘದ ಅಖಿಲ ಭಾರತದ ಸಹ ಸಂಘಟನಾ ಕಾರ್ಯದರ್ಶಿಗಳಾದ ಮಾನನೀಯ ಶ್ರೀ ಜಿ. ಲಕ್ಷ್ಮಣ ಜಿ ರಾಜ್ಯಾಧ್ಯಕ್ಷರಾದ ಶ್ರೀ ಸಂದೀಪ ಬೂದಿಹಾಳ, ರಾಜ್ಯ ಸಹ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅನಿಲ ಬಿರಾದಾರ ಹಾಗೂ ರಾಜ್ಯ ಉಪಾಧ್ಯಕ್ಷರಾದ ಶ್ರೀ […]

ಗುರುವಂದನಾ ಕಾರ್ಯಕ್ರಮ - ಬೆಂಗಳೂರು ಉತ್ತರ ಜಿಲ್ಲೆ

ಗುರುವಂದನಾ ಕಾರ್ಯಕ್ರಮ – ಬೆಂಗಳೂರು ಉತ್ತರ ಜಿಲ್ಲೆ

24-7-2024 ರ ಬುಧವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯ ವತಿಯಿಂದ ವ್ಯಾಸ ಮುನಿಗಳು, ವಾಲ್ಮೀಕಿ ಮಹರ್ಷಿಗಳ ನೆನಪಿನಲ್ಲಿ ಗುರುಗಳ ಸೇವೆಗಳನ್ನು ಸ್ಮರಣೆ ಮಾಡುತ್ತಾ ಗುರುಗಳಿಗೆ ಮಹತ್ತರ ಸ್ಥಾನ ನೀಡಿ ಅವರು ನಡೆದ ಹಾದಿ, ಗುರುಗಳ ಮೌಲ್ಯಗಳು, ಆದರ್ಶಗಳನ್ನು ಇಂದಿನ ವಿದ್ಯಾರ್ಥಿಗಳ ಬಾಳಿಗೆ ನೀಡುವಂತಹ ಗುರುವಂದನಾ ಕಾರ್ಯಕ್ರಮವನ್ನು ಶ್ರೀರಾಮಪುರದಲ್ಲಿರುವ ಪವನ್ ಪ್ರೌಢಶಾಲೆಯಲ್ಲಿ ವಿಭಿನ್ನವಾದ ರೀತಿಯಲ್ಲಿ ಶಾಲೆಯ ಆಡಳಿತ ಮಂಡಳಿ ಶಿಕ್ಷಕರು ಹಾಗೂ ಮಾಧ್ಯಮಿಕ ಶಿಕ್ಷಕ ಸಂಘದ ಪದಾಧಿಕಾರಿಗಳೊಂದಿಗೆ ಆಚರಿಸಲಾಯಿತು. ಬೆಂಗಳೂರು ಉತ್ತರ ಜಿಲ್ಲೆಯ […]

ನಿಯೋಗದಿಂದ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರ ಭೇಟಿ

ನಿಯೋಗದಿಂದ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರ ಭೇಟಿ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ನಿಯೋಗ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾದ ಶ್ರೀಮತಿ ಸಿಂಧು ರೂಪೇಶ ರವರನ್ನು ಭೇಟಿಯಾಗಿ ಪಿ ಯು ಕಾಲೇಜುಗಳ ಮಾನ್ಯತೆ ನವೀಕರಣ, ಅನುದಾನಿತ ಉಪನ್ಯಾಸಕರ ಕಾರ್ಯಭಾರ ಸರಿಪಡಿಸುವುದು, ಖಾಲಿ ಹುದ್ದೆಗಳ ಭರ್ತಿ ಗೆ ಅನುಮತಿ ನೀಡುವ ಬಗ್ಗೆ, ಅನುದಾನರಹಿತ ಕಾಲೇಜುಗಳ SATS Portal ಚಾಲ್ತಿ ಮಾಡುವ ಬಗ್ಗೆ ಮತ್ತು ದ್ವಿತೀಯ ಪಿಯುಸಿ 1 , 2, 3 ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರಗಳ ಮೇಲೆ ಆಗುತ್ತಿರುವ ಒತ್ತಡ ಮತ್ತು ತರಗತಿಗಳು […]

ಶ್ರೀ ಕೃ. ನರಹರಿ ಅವರನ್ನು ಭೇಟಿ ಮಾಡಿದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ

ಶ್ರೀ ಕೃ. ನರಹರಿ ಅವರನ್ನು ಭೇಟಿ ಮಾಡಿದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ

ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟ ಮಾಡಿದ್ದ ಶ್ರೀ ಕೃ. ನರಹರಿ ಅವರ ನಿವಾಸಕ್ಕೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ ಕೆ. ಅಣ್ಣಾಮಲೈ ಅವರು ಭೇಟಿ ನೀಡಿ ಸನ್ಮಾನಿಸಿ, ತುರ್ತು ಪರಿಸ್ಥಿತಿಯ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥ ನಾರಾಯಣ್, ವಿಧಾನ ಪರಿಷತ್ ಮಾಜಿ ಸದಸ್ಯ ಶ್ರೀ ರಾಮಚಂದ್ರಗೌಡ ಮತ್ತು ಪ್ರಮುಖರು ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕರ ಕಾರ್ಯಶ್ಲಾಘನೆ, ಹಾಗೂ ಶುಭ ಕೋರಿಕೆ

ನಿವೃತ್ತ ಶಿಕ್ಷಕರ ಕಾರ್ಯಶ್ಲಾಘನೆ, ಹಾಗೂ ಶುಭ ಕೋರಿಕೆ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಇಬ್ಬರು ಹಿರಿಯ ಕಾರ್ಯಕರ್ತರುಗಳಾದ ಶ್ರೀ ಜೆ.ಎಂ ಜೋಶಿ, ವಿಜ್ಞಾನ ಶಿಕ್ಷಕರು, ಗಾಂಧಿ ಸ್ಮಾರಕ ಪ್ರೌಢಶಾಲೆ, ಬೆಂಗಳೂರು, ಇವರು ಸುಮಾರು 35 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿಯಾಗಿದ್ದಾರೆ ಹಾಗೂ ಶ್ರೀ ಗಂಗಪ್ಪ, ಕನ್ನಡ ಶಿಕ್ಷಕ, ಶ್ರೀ ಮಲ್ಲಿಕಾರ್ಜುನ ಪ್ರೌಢಶಾಲೆ ಬೆಂಗಳೂರು, ಇಲ್ಲಿ ಸುಮಾರು 34 ವರ್ಷಗಳ ಕಾಲ ಸೇವೆ ಸಲ್ಲಿಸಿ ತಮ್ಮ ಶಿಕ್ಷಕ ಸೇವೆಯಿಂದ ವಯೋನಿವೃತ್ತರಾಗಿದ್ದಾರೆ. ಸದರಿ ಶಿಕ್ಷಕರು ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಕರ್ತರಾಗಿ ಸುದೀರ್ಘ ಕಾಲ ಸಂಘದ […]

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ರಘು ಕೊಡುಗೆ ಅಪಾರ: ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ರಘು ಕೊಡುಗೆ ಅಪಾರ: ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ: ಡಾ. ರಘು ಅಕಮಂಚಿ ಒಬ್ಬ ಭಾಗ್ಯಶಾಲಿ ವ್ಯಕ್ತಿ, ಮನೆಯಿಂದ ಸಹಕಾರವಿಲ್ಲದಿದ್ದರೆ ಸಾಮಾಜಿಕ ಕಾರ್ಯ ಮಾಡಲು ಸಾಧ್ಯವಿಲ್ಲ ಇಂದು ರಘು ಅವರ ಸಾಧನೆಗೆ ಅವರ ತಂದೆ ತಾಯಿ, ಮಡದಿ ಮತ್ತು ಮಕ್ಕಳೇ ಕಾರಣ ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಶ್ರೀ ಮಂಗೇಶ ಭೇಂಡೆ ಹೇಳಿದರು. ನಗರದ ಬಿವಿಬಿ ಬಯೋಟೆಕ್ ಅಡಿಟೋರಿಯಂನಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಮತ್ತು ಅಖಿಲ ಭಾರತೀಯ ರಾಷ್ಟ್ರೀಯ ಶಿಕ್ಷಕ ಮಹಾ ಸಂಘಗಳ ವತಿಯಿಂದ 60 ವಸಂತಗಳನ್ನು […]

ಅನುದಾನಿತ ಶಿಕ್ಷಣ ಸಂಸ್ಥೆಗಳ ವರ್ಗಾವಣೆ ಅಧಿಸೂಚನೆ ದಿನಾಂಕವನ್ನು ವಿಸ್ತರಿಸುವಂತೆ ಆಗ್ರಹ

ಅನುದಾನಿತ ಶಿಕ್ಷಣ ಸಂಸ್ಥೆಗಳ ವರ್ಗಾವಣೆ ಅಧಿಸೂಚನೆ ದಿನಾಂಕವನ್ನು ವಿಸ್ತರಿಸುವಂತೆ ಆಗ್ರಹ

ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ವರ್ಗಾವಣೆಯ ಅಧಿಸೂಚನೆಯನ್ನು ಶಿಕ್ಷಣ ಇಲಾಖೆಯ, ಬೇಸಿಗೆ ರಜೆ ಕಾಲದಲ್ಲಿ ಮೇ ತಿಂಗಳ ಅವಧಿಯೊಳಗೆ ವರ್ಗಾವಣೆ ಪ್ರಕ್ರಿಯೆಯನ್ನು ಮುಗಿಸುವಂತೆ ಸೂಚಿಸಿದ್ದರು. ಅನೇಕ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಬೇಸಿಗೆ ರಜೆಯಲ್ಲಿ ಮೌಲ್ಯಮಾಪನ ಕಾರ್ಯ ಹಾಗೂ ಲೋಕಸಭೆಯ ಚುನಾವಣಾ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಅನುದಾನಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಲಿಯವರು ಬೇಸಿಗೆ ರಜೆಯಲ್ಲಿ ಲಭ್ಯವಿರದ ಕಾರಣದಿಂದ ಆಡಳಿತ ಮಂಡಲಿಗಳ ನಿರಪೇಕ್ಷಣಾ […]

ಮುಖ್ಯಮಂತ್ರಿಗಳಿಗೆ ಮನವಿ

ಮುಖ್ಯಮಂತ್ರಿಗಳಿಗೆ ಮನವಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳ ಆದೇಶವನ್ನು ಹಿಂಪಡೆಯುವ ಕುರಿತು ಶಿಕ್ಷಕ ಸಂಘದ ಪದಾಧಿಕಾರಿಗಳಿಂದ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು.

Highslide for Wordpress Plugin