ಕಲ್ಬುರ್ಗಿ ಜಿಲ್ಲೆಯಿಂದ ಮನವಿ

ಕಲ್ಬುರ್ಗಿ ಜಿಲ್ಲೆಯಿಂದ ಮನವಿ

ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರೌಢಶಾಲಾ ವಿಭಾಗದಲ್ಲಿ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಸುಮಾರು ವರ್ಷಗಳಿಂದ ಆ ಶಾಲೆ ಹಿರಿಯ ಸಹ ಶಿಕ್ಷಕರುಗಳು ಕಾರ್ಯನಿರ್ವಹಿಸುತ್ತಿರುವರು ಪ್ರತ್ಯೇಕವಾದ DDO ಕೋಡ್ ಹೊಂದಿರುವ ಪ್ರೌಢ ವಿಭಾಗದಲ್ಲಿ ಅವರಿಗೆ ಪ್ರಭಾರ ಭತ್ಯೆ, ಗಳಿಕೆ ರಜೆಯನ್ನು ಕೊಡುತ್ತಿದ್ದು, ಈಗ ಪ್ರೌಢ ವಿಭಾಗದಲ್ಲಿ ಮುಖ್ಯೋಪಾಧ್ಯಾಯರ ಹುದ್ದೆ ಸೃಷ್ಟಿಸಿಲ್ಲ ಎಂದು ಆದೇಶದಲ್ಲಿ ತಿಳಿಸಿರುವುದು, ಗೊಂದಲ ಸೃಷ್ಟಿಸಿದೆ. ಹೀಗಾಗಿ ಪ್ರಭಾರ ಭತ್ಯೆ, ಗಳಿಕೆ ರಜೆ ಹಾಗೂ ಇತರೆ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಸುಮಾರು ಬಾರಿ ಮುಖ್ಯೋಪಾಧ್ಯಾಯರಿಗೆ ಬಡ್ತಿ ಕೊಟ್ಟರೂ ಸಹ […]

ರಾಷ್ಟ್ರೀಯ ಕಾರ್‍ಯಕಾರಿಣಿ - ಒಂದು ವರದಿ

ರಾಷ್ಟ್ರೀಯ ಕಾರ್‍ಯಕಾರಿಣಿ – ಒಂದು ವರದಿ

ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘವು ಸ್ವಾತಂತ್ರ್ಯದ ಅಮೃತೋತ್ಸವದ ಸಂದರ್ಭದಲ್ಲಿ ಆಗಸ್ಟ್ 1 ರಂದು ಒಂದೇ ದಿನ ಒಂದು ಲಕ್ಷ ವಿದ್ಯಾಲಯಗಳನ್ನು ತಲುಪುವ ಗುರಿಯನ್ನು ಹೊಂದಿದೆ. ಇದರ ಜೊತೆಗೆ ದೇಶದ 75 ವಿಶ್ವವಿದ್ಯಾಲಯಗಳಲ್ಲಿ ಅಮೃತೋತ್ಸವದ ವಿಷಯದಲ್ಲಿ ಸೆಮಿನಾರ್‌ಗಳನ್ನು ಮತ್ತು 750 ಮಹಾವಿದ್ಯಾಲಯಗಳಲ್ಲಿ ವ್ಯಾಖ್ಯಾನವನ್ನು ಆಯೋಜಿಸುವ ಗುರಿಯನ್ನು ಹೊಂದಿದೆ ಎನ್ನುವ ನಿರ್ಣಯವನ್ನು ಗುಜರಾತ್ ರಾಜ್ಯದ ವಡೋದರದ ಓಂ ರೀಜೆನ್ಸಿಯಲ್ಲಿ ದಿನಾಂಕ 26 ಮತ್ತು 27 ರ ಫೆಬ್ರವರಿ 2022  ರಂದು ನಡೆದ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ […]

ಬೆಂಗಳೂರು ದಕ್ಷಿಣ ಜಿಲ್ಲೆ : ಫೋನ್ ಇನ್ ಕಾರ್ಯಕ್ರಮ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ (ರಿ) ಬೆಂಗಳೂರು ದಕ್ಷಿಣ ಜಿಲ್ಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಗಾಗಿ ಫೋನ್ ಇನ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 24-2-2022 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ದಕ್ಷಿಣ ಜಿಲ್ಲೆಯ ಕಾರ್ಯಾಲಯದಲ್ಲಿ ಜರುಗಿತು. ಮಾನ್ಯ ಉಪನಿರ್ದೇಶಕರಾದ ಶ್ರೀ ಬೈಲಾಂಜನಪ್ಪ ಪಿ.ರವರು ಫೋನ್ ಇನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಘದ ಈ ವಿನೂತನ ಕಾರ್ಯಕ್ರಮವನ್ನು ಶ್ಲಾಘಿಸಿ ಈ ವರ್ಷದ (2021-22) ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು […]

ಬೆಂಗಳೂರು ಉತ್ತರ ಜಿಲ್ಲೆ : ಫೋನ್ ಇನ್ ಕಾರ್ಯಕ್ರಮ

ಬೆಂಗಳೂರು ಉತ್ತರ ಜಿಲ್ಲೆ : ಫೋನ್ ಇನ್ ಕಾರ್ಯಕ್ರಮ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ (ರಿ) ಬೆಂಗಳೂರು ಉತ್ತರ ಜಿಲ್ಲೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಫೋನ್ ಇನ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ 23-02-2022 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಉತ್ತರ ಜಿಲ್ಲೆಯ ಕಾರ್ಯಾಲಯದಲ್ಲಿ ಮಾನ್ಯ ಉಪನಿರ್ದೇಶಕರಾದ ಶ್ರೀ ನಾರಾಯಣರವರು ಫೋನ್ ಇನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಈ ವರ್ಷದ (2021-22) ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು. ಸಂಘದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

ಚಿಕ್ಕೋಡಿ : ಫೋನ್-ಇನ್ ಕಾರ್ಯಕ್ರಮ

ಚಿಕ್ಕೋಡಿ : ಫೋನ್-ಇನ್ ಕಾರ್ಯಕ್ರಮ

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಗದಗ ಜಿಲ್ಲೆ ಚಿಕ್ಕೋಡಿ ಹಾಗೂ ಸಂಘದ ಸಂಯುಕ್ತಾಶ್ರಯದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ನೇರ ಫೋನ್-ಇನ್ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಈ ಕಾರ್ಯಕ್ರಮವು ಎಸ್.ಎಸ್.ಎಲ್.ಸಿ ಪರೀಕ್ಷೆ ಮುಗಿಯುವರೆಗೂ ಚಾಲ್ತಿಯಲ್ಲಿರುತ್ತದೆ. ಸದರಿ ಉದ್ಘಾಟನಾ ಸಮಾರಂಭದಲ್ಲಿ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಎ ಸಿ ಗಂಗಾಧರ ಸರ್, ಆರ್ ಎಂ ಎಸ್ ಎ ಸಮನ್ವಯಾಧಿಕಾರಿಗಳಾದ ಶ್ರೀಯುತ ಆಂಜನೇಯ ಸರ್ ಮತ್ತು ಎಸ್ ಎಸ್ ಎಲ್ ಸಿ ಜಿಲ್ಲಾ ನೋಡಲ್ ಅಧಿಕಾರಿಗಳಾದ ಶ್ರೀಯುತ ಅರಿಹಂತ್ ಬಿರಾದಾರ್ ಪಾಟೀಲ್ ಸರ್ ಹಾಗೂ ಸಂಪನ್ಮೂಲ […]

ಬಳ್ಳಾರಿ : ಆಂಗ್ಲ ಭಾಷೆ ತರಬೇತಿ ಕಾರ್ಯಕ್ರಮ

ಬಳ್ಳಾರಿ : ಆಂಗ್ಲ ಭಾಷೆ ತರಬೇತಿ ಕಾರ್ಯಕ್ರಮ

ಮಾಧ್ಯಮಿಕ ಶಿಕ್ಷಕ ಸಂಘ ಹಾಗೂ ಅಕ್ಕಿ ಬಸಮ್ಮ ಪದವಿ ಪೂರ್ವ ಕಾಲೇಜು ತಂಬ್ರಹಳ್ಳಿ ಆವರಣದಲ್ಲಿ PUC ಮಕ್ಕಳಿಗೆ ಒಂದು ದಿನದ ಆಂಗ್ಲ ಭಾಷೆಯ ಬಗ್ಗೆ ತರಬೇತಿ ನೀಡುವ ಮೂಲಕ ಪರೀಕ್ಷೆ ಭಯ ಬೇಡ, ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಅವರ ಅನೇಕ ಅನುಮಾನದ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಸಮಾಧಾನ ಮಾಡಿದರು. ಶ್ರೀ ಜಂಭುನಾಥವೊಗ್ಗ ನಿವೃತ್ತ ಉಪನ್ಯಾಸಕರು ಹಾಗು ರಾಜ್ಯ ಉಪಾಧ್ಯಕ್ಷರಾದ ಶ್ರೀ ಕೊಟ್ರಪ್ಪ ಆರ್, ರಾಷ್ಟ್ರೋತ್ಥಾನ ಪ್ರೌಢಶಾಲೆ ಹಗರಿಬೊಮ್ಮನಹಳ್ಳಿ ಇವರು ಹಾಗೂ ಕಾಲೇಜ್ ಪ್ರಾಚಾರ್ಯರಾದ ಶ್ರೀ […]

ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘ ಶಿಕ್ಷಕ ಸಮ್ಮಾನ – ಒಂದು ವರದಿ

ಸಮಾಜ ಸುಧಾರಣೆಯಲ್ಲಿ ಶಿಕ್ಷಕರ ಪಾತ್ರ ಮಹತ್ವಯುತವಾದದ್ದು ಎಂದು ಹಿಮಾಚಲ ಪ್ರದೇಶದ ಶಿಮ್ಲಾ (ಕುಫ್ರಿ)ದಲ್ಲಿ 19, ಡಿಸೆಂಬರ್, 2021 ರಂದು ನಡೆದ ಶಿಕ್ಷಕ ಸಮ್ಮಾನ ಕಾರ್ಯಕ್ರಮದಲ್ಲಿ ಪ್ರಮುಖ ಧಾರ್ಮಿಕ ಬೋಧಕರಾದ ಸ್ವಾಮಿ ಜ್ಞಾನಾನಂದ ಜಿ ಮಹಾರಾಜ್‌ರು ಹೇಳಿದರು. ಕಾರ್ಯಕ್ರಮದಲ್ಲಿ ಹಿಮಾಚಲದ ಪ್ರದೇಶದ ಮುಖ್ಯಮಂತ್ರಿಗಳಾದ ಜೈರಾಮ್ ಠಾಕೂರ್ ಭಾಗವಹಿಸಿ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ಮೂವರು ಶಿಕ್ಷಣ ತಜ್ಞರಿಗೆ ಅವರು ಶಿಕ್ಷಾ ಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘ (ABRSM) 2015 ರಿಂದ […]

ರಾಜ್ಯ ಯೋಜನಾ ನಿರ್ದೇಶಕರಿಗೆ ಮನವಿ

ರಾಜ್ಯ ಯೋಜನಾ ನಿರ್ದೇಶಕರಿಗೆ ಮನವಿ

ಕ. ರಾ. ಮಾ. ಶಿ.ಸಂಘದಿಂದ ಹಿಂದಿ ಶಿಕ್ಷಕರಿಗೆ BRP ಮತ್ತು ECO ಹುದ್ದೆಗಳಿಗೆ ಅರ್ಜಿ ಹಾಕಲು ಅನುವು ಮಾಡಿಕೊಡಬೇಕಾಗಿ ರಾಜ್ಯ ಯೋಜನಾ ನಿರ್ದೇಶಕರಿಗೆ ಕೋರಲಾಯಿತು.

ಶಿಕ್ಷಣ ಸಚಿವರಿಗೆ ಮನವಿ

ಶಿಕ್ಷಣ ಸಚಿವರಿಗೆ ಮನವಿ

1987 ರಿಂದ 1995 ರ ನಡುವೆ ಆರಂಭವಾಗಿ ಅನುದಾನಕ್ಕೆ ಒಳಪಡಿಸಲು ಬಾಕಿ ಇರುವ ಅನುದಾನ ರಹಿತ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಬಗ್ಗೆ ಹಾಗೂ 1995  ರ ನಂತರ ಆರಂಭವಾದ ಅನುದಾನ ರಹಿತ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಕುರಿತು, ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡಲು ತೊಡಕಾಗಿರುವ ಆರ್ಥಿಕ ಮಿತವ್ಯಯದ ಆದೇಶವನ್ನು ಹಿಂಪಡೆಯುವ ಕುರಿತು ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ ನಾಗೇಶ್ ರವರಿಗೆ ಶಿಕ್ಷಣ ಸಂಕುಲ […]

ಕಾಲೇಜು ಅತಿಥಿ ಉಪನ್ಯಾಸಕರ ಕುರಿತು ರಾಜ್ಯ ಸರ್ಕಾರದಿಂದ ಐತಿಹಾಸಿಕ ನಿರ್ಧಾರ – ಕೆ.ಆರ್.ಎಮ್.ಎಸ್.ಎಸ್. ಸ್ವಾಗತ

ಅತಿಥಿ ಉಪನ್ಯಾಸಕರ ಬಹು ವರ್ಷಗಳ ಸಮಸ್ಯೆಯ ಪರಿಹಾರಕ್ಕಾಗಿ ರಾಜ್ಯಸರ್ಕಾರ ತೆಗೆದುಕೊಂಡ ಐತಿಹಾಸಿಕ ನಿರ್ಧಾರಕ್ಕೆ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ಕೆ.ಆರ್.ಎಮ್.ಎಸ್.ಎಸ್.) ಸ್ವಾಗತಿಸುತ್ತದೆ. ಕಳೆದ 20 ವರ್ಷಗಳಿಂದ ಅತಿಥಿ ಉಪನ್ಯಾಸಕರ ಬೇಡಿಕೆಗಳ ಕುರಿತಂತೆ ಕೆ.ಆರ್.ಎಮ್.ಎಸ್.ಎಸ್. ಹಲವಾರು ಬಾರಿ ರಾಜ್ಯದ ಮಾನ್ಯ ಉನ್ನತ ಶಿಕ್ಷಣ ಸಚಿವರಿಗೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮನವಿ ಮಾಡಿಕೊಂಡಿತ್ತು. ಕಳೆದ ಒಂದು ತಿಂಗಳಿಂದ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಹೋರಾಟ ಮಾಡುತ್ತಿದ್ದರು. ಈ ಹೋರಾಟಕ್ಕೆ ಕೆ.ಆರ್.ಎಮ್.ಎಸ್.ಎಸ್. ಬೆಂಬಲಕೊಟ್ಟು, ಉನ್ನತ ಶಿಕ್ಷಣ ಸಚಿವರಿಗೆ […]

Highslide for Wordpress Plugin